ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲ ವಜುಭಾಯಿವಾಲಾ ಅವರಿಗೆ ನೀಡಲಿದ್ದು, ಆ ಮೂಲಕ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅಧಿಕೃತ ಸಿದ್ಧತೆ ಆರಂಭಗೊಳ್ಳಲಿದೆ. ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ರಾಜ್ಯಪಾಲರು ರಾಜಭವನದಲ್ಲಿ 13 ನೂತನ ಸಚಿವರಿ ಪ್ರಮಾಣ ವಚನ ಭೋದಿಸಲಿದ್ದಾರೆ. 14 ಮಂದಿ ಹಾಲಿ ಸಚಿವರನ್ನು ನೂತನ ಸಂಪುಟದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ 12 ಮಂದಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಂಪುಟದಿಂದ ಕೈಬಿಡಲಾಗುವ ಸಚಿವರು: ಪಿಟಿ ಪರಮೇಶ್ವರ್ ನಾಯಕ್ (ಕಾರ್ಮಿಕ ಸಚಿವ), ಯುಟಿ ಖಾದರ್ (ಆರೋಗ್ಯ ಸಚಿವ), ವಸತಿ ಸಚಿವ ಅಂಬರೀಶ್ (ವಸತಿ ಸಚಿವ), ಕಿಮ್ಮನೆ ರತ್ನಾಕರ್ (ಶಿಕ್ಷಣ ಸಚಿವ), ಅಭಯ್ ಚಂದ್ರ ಜೈನ್ (ಮೀನುಗಾರಿಕೆ ಸಚಿವ), ಕೃಷ್ಣ ಬೈರೇಗೌಡ (ಕೃಷಿ ಸಚಿವ), ದಿನೇಶ್ ಗುಂಡೂರಾವ್ (ಆಹಾರ-ನಾಗರಿಕ ಪೂರೈಕೆ ಸಚಿವ), ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ ಸಚಿವ),ಶ್ಯಾಮನೂರು ಶಿವಶಂಕರಪ್ಪ (ತೋಟಗಾರಿಕೆ ಸಚಿವ), ಬಿ ಶ್ರೀನಿವಾಸ್ ಪ್ರಸಾದ್ (ಕಂದಾಯ ಸಚಿವ), ಎಸ್ ಆರ್ ಪಾಟೀಲ್ (ಐಟಿ ಬಿಟಿ ಸಚಿವ), ಖಮರುಲ್ ಇಸ್ಲಾಂ (ಅಲ್ಪ ಸಂಖ್ಯಾತ ಸಚಿವ), ಸತೀಶ್ ಜಾರಕಿ ಹಳಿ (ಸಣ್ಣ ಕೈಗಾರಿಕೆ ಸಚಿವ)
ಬಾಬೂರಾವ್ ಚಿಂಚನಸೂರ (ಜವಳಿ ಸಚಿವ), ಶಿವರಾಜ್ ತಂಗಡಗಿ (ಸಣ್ಣ ನೀರಾವರಿ ಸಚಿವ)
ಸಂಪುಟ ಸೇರುವ ನೂತನ ಸಚಿವರು: ರುದ್ರಪ್ಪ ಲಮಾಣಿ (ಹಾವೇರಿ ಶಾಸಕ), ಸಂತೋಷ್ ಲಾಡ್ (ಧಾರವಾಡ ಜಿಲ್ಲೆಯ ಕಲಘಟಗಿ), ತನ್ವೀರ್ ಸೇಠ್- (ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ), ಶಿವಮೂರ್ತಿ ನಾಯಕ್ ಅಥವಾ ಗೋಪಾಲಕೃಷ್ಣ ಎನ್ ಎ ಹ್ಯಾರಿಸ್ (ಶಾಂತಿನಗರ ಶಾಸಕ), ಕೆ ಸುಧಾಕರ್ (ಚಿಕ್ಕಬಳ್ಳಾಪುರ ಶಾಸಕ), ಕಾಗೋಡು ತಿಮ್ಮಪ್ಪ (ಸಾಗರ ಶಾಸಕ), ಸುಧಾಕರ್ (ಹಿರಿಯೂರು ಶಾಸಕ ), ಎಂ ಕೃಷ್ಣಪ್ಪ (ವಿಜಯನಗರ ಶಾಸಕ), ರಮೇಶ್ ಕುಮಾರ್ (ಶ್ರೀನಿವಾಸಪುರ ಶಾಸಕ), ಪ್ರಮೋದ್ ಮದ್ವರಾಜ್ (ಉಡುಪಿ ಶಾಸಕ), ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ), ಪ್ರಿಯಾಂಕ್ ಖರ್ಗೆ (ಚಿತ್ತಾಪುರ ಶಾಸಕ)ಅಪ್ಪಾಜಿ ನಾಡಗೌಡ ಅಥವಾ ಸಿದ್ದು ನ್ಯಾಮಗೌಡ.