ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಪ್ರಧಾನ ಆಗಮಿಕರ ತಾಯಿ ನಿಧನರಾದ ಹಿನ್ನಲ್ಲೆಯಲ್ಲಿ ದೇವಸ್ಥಾನದ ಮುಖ್ಯ ದ್ವಾರವನ್ನು ಬಂದ್ ಮಾಡಿ ಪೂಜೆಯನ್ನು ಸ್ಥಗಿತಗೊಳಿಸಲಾಗಿದೆ.
ಚಾಮುಂಡಿ ದೇವಸ್ಥಾನದ ಪ್ರಧಾನ ಆಗಮಿಕರಾದ ಶಶಿ ಶೇಖರ್ ದೀಕ್ಷಿತ್ ಅವರ ತಾಯಿ ಸರೋಜಮ್ಮ (72). ನಿಧನರಾದ ಹಿನ್ನಲ್ಲೆಯಲ್ಲಿ ದೇವಸ್ಥಾನದ ಮುಖ್ಯದ್ವಾರವನ್ನು ಬಂದ್ ಮಾಡಲಾಗಿದ್ದು ದೇವರಿಗೆ ಪೂಜೆ ಮತ್ತು ಮಂಗಳಾರತಿಯನ್ನು ಸ್ಥಗಿತಗೊಳಿಸಿದ್ದು ಉತ್ತರ ದ್ವಾರದ ಮೂಲಕ ಬಂದಿರುವ ಭಕ್ತರಿಗೆ ದೇವಿಯ ದರ್ಶನ ಮಾಡಲು ಆವಕಾಶ ಕಲ್ಪಿಸಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಯಾರೇ ಸತ್ತರು ಅಂತ್ಯ ಸಂಸ್ಕಾರ ಆಗುವವರೆಗೂ ದೇವಸ್ಥಾನದ ಮುಖ್ಯ ದ್ವಾರವನ್ನು ಹಾಗೂ ಚಾಮುಂಡಿ ತಾಯಿಗೆ ಪೂಜೆ ಮತ್ತು ಮಂಗಳಾರತಿಯನ್ನು ಮಾಡಲಾಗುವುದಿಲ್ಲ. ಇದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಅಂತ್ಯ ಸಂಸ್ಕಾರವಾದ ನಂತರ ದೇವಸ್ಥಾನವನ್ನು ಶುಚಿಗೊಳಿಸಿ ನಂತರ ಮಂಗಳ ದ್ರವ್ಯಗಳನ್ನು ಸಿಂಪಡನೆ ಮಾಡಿದ ನಂತರ ಚಾಮುಂಡಿ ತಾಯಿಗೆ ಪೂಜೆ ನಡೆಸುವುದು ಸಂಪ್ರದಾಯ.