ಮೈಸೂರು: ಗೃಹಿಣಿ ಅನುಮಾನಸ್ಪದವಾಗಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೆ.ಆರ್ ನಗರ ತಾಲೂಕಿನ ಮಾರಗೌಡನಹಳ್ಳಿಯಲ್ಲಿ ನಡೆದಿದ್ದು, ಪತಿಯೇ ಕೊಲೆ ಮಾಡಿ ಕೆರೆಯಲ್ಲಿ ಎಸೆದು ಹೋಗಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಏನಿದು ಘಟನೆ: ಹೀಗೆ ಕೆರೆಯಲ್ಲಿ ಶವವಾಗಿ ಪತ್ತೆಯಾದ ಗೃಹಿಣಿ ಅಶ್ವಿನಿ(32). ಈಕೆ ಕಳೆದ 8 ವರ್ಷಗಳ ಹಿಂದೆ ಮಾರಗೌಡನಹಳ್ಳಿಯ ಗಿರೀಶ್ ಎಂಬುವವರನ್ನ ಮದುವೆಯಾಗಿದ್ದಳು. ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳವಾಡುತ್ತಿದ್ದು ಹಲವಾರು ಬಾರಿ ನ್ಯಾಯ ಪಂಚಾಯಿತಿ ಸಹ ಮಾಡಲಾಗಿತ್ತು.
ಇಂದು ಬೆಳಗ್ಗೆ ಈಕೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಗಂಡನೇ ಈಕೆಯನ್ನ ಕೊಲೆ ಮಾಡಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಈ ಸಂಬಂಧ ಕೆ.ಆರ್ ನಗರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ತಲೆ ಪರಿಸಿಕೊಂಡಿರುವ ಗಂಡನಿಗೆ ಭಲೆ ಬೀಸಿದ್ದಾರೆ.