ಮೈಸೂರು: ರಸ್ತೆ ಅಪಘಾತದಲ್ಲಿ ತನ್ನ ಹಿಂಬದಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಬೀದಿ ನಾಯಿಯನ್ನು ತನ್ನ ಸ್ವಂತ ಮಗುವಿನಂತೆ ಹಾರೈಕೆ ಮಾಡಿ ಮರು ಜೀವ ನೀಡಿ ಸಾರ್ಥಕತೆ ಮೆರೆದಿದ್ದಾರೆ ಜಂಬುಕೇಶ್ ಕುಟುಂಬ.
ಕಳೆದ ಮೂರು ತಿಂಗಳ ಹಿಂದೆ ನಗರದ ಬೆಮೆಲ್ ಬಡವಾಣೆಯ ಕುಟುಂಬದ ಪ್ರೀತಿಯ ಬೀದಿ ನಾಯಿಯೊಂದು ರಸ್ತೆ ಅಪಘಾತದಲ್ಲಿ ತನ್ನ ಹಿಂಬದಿಯ ಕಾಲಿನ ಸ್ವಾದೀನವನ್ನ ಕಳೆದುಕೊಂಡು ರೋದಿಸಿತ್ತಿರುವಾಗ ಕನಿಕರದಿಂದ ಜಂಬುಕೇಶ್ ಕುಟುಂಬ ಆ ನಾಯಿಯನ್ನು ಮನೆಗೆ ತಂದು ಚಿಕಿತ್ಸೆ ಪ್ರಾರಂಭಿಸಿದ್ದು. ಅಫಘಾತವಾದ ನಾಯಿಯನ್ನ ಸ್ಥಳೀಯ ಪಶು ವೈದ್ಯರಾದ ಡಾ. ಮದನ್ ಬಳಿ ತೋರಿಸಿದಾಗ ಅವರು ನಾಯಿಗೆ ನಡೆದಾಡಲು ಎರಡು ಚಕ್ರ ನಿರ್ಮಿಸಿ ಚಿಕಿತ್ಸೆ ಪ್ರಾರಂಭಿಸಿದ್ದು ಈಗ ಬೀದಿ ನಾಯಿ ಚೇತರಿಸಿಕೊಳ್ಳುತ್ತಿದೆ.
ಈ ಬಗ್ಗೆ ನ್ಯೂಸ್ ಕರ್ನಾಟಕದ ಜೊತೆ ಮಾತನಾಡಿದ ಮನೆಯ ಮಾಲೀಕ ಜಂಬುಕೇಶ, ನಮ್ಮ ಮನೆಗೆ ಪ್ರತಿದಿನ ಈ ನಾಯಿ ಬರುತ್ತಿದ್ದು ಬಂದಾಗ ನಾವು ಇದಕ್ಕೆ ಅನ್ನ, ಬಿಸ್ಕೆಟ್ ಪತ್ರಿದಿನ ಹಾಕುತ್ತಿದ್ದೇವು. ನಾವು ಅಂಗಡಿಗೆ ಹೋಗುವಾಗ ನಮ್ಮ ಜೊತೆ ಬರುತ್ತಿತು. ರಾತ್ರಿ ಮನೆಯ ಮಹಡಿಯ ಮೇಲೆ ಬಂದು ಮಲಗುತ್ತಿದ್ದು. ನಮ್ಮ ತಂದೆ ತಾಯಿ ತರಕಾರಿ ತರಲು ಹೋದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಸೊಂಟಕ್ಕೆ ಪೆಟ್ಟು ಬಿದ್ದು ಮೇಲೇಳಾರದ ಸ್ಥಿತಿಯಲ್ಲಿದ್ದ ನಾಯಿಯನ್ನು ಮನೆಗೆ ತಂದು ಮನೆಯಲ್ಲೆ ಹಾರೈಕೆ ಮಾಡುತ್ತಿದ್ದು, ನಮ್ಮ ಕಾರಿನಲ್ಲೇ ವೈದ್ಯರ ಬಳಿ ತೋರಿಸಿದೆವು. ಒಂದೆರಡು ತಿಂಗಳಲ್ಲಿನಲ್ಲಿ ಕಾಲು ಮೊದಲಿನ ಸ್ಥಿತಿಗೆ ಬರಲಿದ್ದು ಅಲ್ಲಿಯವರೆಗೆ ದ್ವಿಚಕ್ರದ ಗಾಡಿಯಲ್ಲಿ ವಾಕಿಂಗ್ ಮಾಡಿಸುತ್ತಿದ್ದೇನೆ ಎನ್ನುತ್ತಾರೆ ಮನೆಯ ಮಾಲೀಕ.
ಹೆತ್ತ ತಂದೆ ತಾಯಿಗಳನ್ನು ಮನೆಯಿಂದ ಹೊರಹಾಕುವ ಇಂತಹ ಕಾಲದಲ್ಲಿ ಬೀದಿ ನಾಯೊಂದನ್ನ ಮಾನವೀಯತೆಯಿಂದ ಕಳೆದ ಮೂರು ತಿಂಗಳಿನಿಂದ ಮಗನ ರೀತಿ ನೋಡಿಕೊಳ್ಳುತ್ತಿರುವ ಇಂತಹ ಕುಟುಂಬ ನಿಜಕ್ಕೂ ಸಮಾಜಕ್ಕೆ ಮಾದರಿ.