ಮೈಸೂರು: ನೋಟು ಅಮಾನ್ಯದಿಂದ ಜನಸಮಾನ್ಯರಿಗೆ ತೊಂದರೆಯಾಗಿದೆ ಎಂದು ಮೈಸೂರು ಕಾಂಗ್ರೆಸ್ ವತಿಯಿಂದ ಸಚಿವರ ನೇತೃತ್ವದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನು ಆಚರಿಸಲಾಯಿತು.
ಇಂದು ನಗರದ ಕಾಂಗ್ರೆಸ್ ಪಾರ್ಟಿ ಆಫೀಸ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ಸಾಗಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕರಾಳ ದಿನಚಾರಣೆಯಲ್ಲಿ ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಎಲ್ಲಾ ಕಾರ್ಯರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ನೋಟು ಅಮಾನೀಕರಣ ವಿಚಾರ ಹೊಸದಲ್ಲ. ಕಾಂಗ್ರೆಸ್ ಪಕ್ಷವು ಹಿಂದೆ ನೋಟ್ ಬ್ಯಾನ್ ಮಾಡಿತ್ತು. ನೋಟ್ ಬ್ಯಾನ್ ಮಾಡಬೇಕು ಆದರೆ ಆರ್ ಬಿಐನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಡಬೇಕು. ಆದರೆ ಮೋದಿ ಇದನ್ನು ಮಾಡದೇ ಸ್ವನಿರ್ಧಾರದಿಂದ ಮಾಡಿ ದೇಶದ ಜನತೆಯನ್ನ ತತ್ತರಿಸುವಂತೆ ಮಾಡಿದ್ದಾರೆ.
ಆದ್ರೆ ಹಿಂದಿನ ನಮ್ಮಕಾಂಗ್ರೆಸ್ ಸರ್ಕಾರ ನೋಟ್ ಬ್ಯಾನ್ ಮಾಡುವಾಗ ಆರ್ ಬಿಐನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನೋಟ್ ಬ್ಯಾನ್ ಮಾಡಿತ್ತು. ನೋಟ್ ಬ್ಯಾನ್ ಸಮಸ್ಯೆ 50 ದಿನದಲ್ಲಿ ಸುಧಾರಣೆ ಆಗುತ್ತೆ ಅಂತ ಹೇಳಿದರು ಮೋದಿ. ಆದರೆ ಒಂದು ವರ್ಷವೇ ಕಳೆದಿದೆ, ಯಾವುದೇ ಸುಧಾರಣೆಯಾಗಿಲ್ಲ. ಇನ್ನೂ ದೇಶದ ಜನರು ನೋಟ್ ಬ್ಯಾನ್ ಸಮಸ್ಯೆಯಿಂದ ಹೊರ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಈ ಕುರಿತು ಉತ್ತರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.