ಮೈಸೂರು: ಇಲ್ಲಿನ ಚೆಲುವಾಂಬ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಸಿಕ್ಕಿದ್ದು, ಮಗು ಯಾರರದ್ದು ಎಂಬುದು ನಿಗೂಢವಾಗಿದೆ.
ಚೆಲುವಾಂಬ ಆಸ್ಪತ್ರೆ 10 ವಾರ್ಡ್ನ ಶೌಚಾಲಯದಲ್ಲಿ ಮಗುವಿನ ಶವ ಸಿಕ್ಕಿದ್ದು, ಮೃತ ಶಿಶು ಯಾರದ್ದು ಎಂದು ಸಿಬ್ಬಂದಿಗಳು ಹಾಗೂ ನರ್ಸ್ಗಳನ್ನು ಕೇಳಿದಾಗ ಈ ಮಗು ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದ ರೂಪಾ ಅವರದ್ದು ಎಂದು ಆರೋಪಿಸಿದ್ದಾರೆ. ಆದರೆ ರೂಪಾ ಮಾತ್ರ ನನ್ನ ಮಗು ಹೊಟ್ಟೆಯೊಳಗೆ ಸಾವನ್ನಪ್ಪಿತ್ತು, ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿ ರಾತ್ರಿ ಶಸ್ತ್ರಚಿಕಿತ್ಸೆ ಮಾಡಿಸಿ ಮಗುವನ್ನು ಹೊರ ತೆಗೆಯಲಾಯಿತು. ಮಧ್ಯಾಹ್ನ ಮಗುವಿನ ಶವವನು ಕೊಟ್ಟರು ಸೋಮವಾರ ಸಂಜೆ ನಮ್ಮ ಜಮೀನಿನಲ್ಲಿ ಮಗುವನ್ನು ಹೊತ್ತಿ ಸಂಸ್ಕಾರ ನಡೆಸಿ ಬಂದಿದ್ದೇವೆ. ಶೌಚಾಲಯದಲ್ಲಿ ಸಿಕ್ಕ ಮಗುವಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ದೇವರಾಜ ಠಾಣೆಯ ಪೊಲೀಸರು ರೂಪ ಪತಿ ಮೂರ್ತಿಯವರ ವಿಚಾರಣೆ ಕೈಗೊಂಡು ಹೂತಿಟ್ಟ ಮಗುವನ್ನು ಹೊರತೆಗೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಪಿತಗೊಂಡ ರೂಪಾ ಹಾಗೂ ಮೂರ್ತಿ ದಂಪತಿಗಳು ಹಾಗೂ ಸಂಬಂಧಿರು ಹೂತಿಟ್ಟ ಮಗುವಿನ ಶವವನ್ನು ದೇವರಾಜ ಠಾಣೆಗೆ ತಂದೂ ಮಗು ನಮ್ಮದಲ್ಲವೆಂದು ಪ್ರತಿಭಟಿಸಿದ್ದಾರೆ.
ಹಾಗಾದರೆ ಶೌಚಾಲಯದಲ್ಲಿ ಸಿಕ್ಕ ಮಗು ಯಾರದ್ದು ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಸಂಬಂಧ ದೇವರಾಜ ಠಾಣೆಯ ಪೊಲೀಸರು ತೀವ್ರವಾದ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಚೆಲುವಾಂಬ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.