ಮಂಗಳೂರು: ಮಂಗಳೂರು ವಿವಿಯ 42ನೇ ವಾರ್ಷಿಕ ಘಟಿಕೋತ್ಸವ ಜೂನ್ 15ರಂದು ನಡೆದಿದ್ದು, ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಈ ಬಾರಿ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ನೀಡಲಿದೆ. ವಿವಿಯ ಮುಂದೆ ಬಂದಿರುವ ಒಟ್ಟು 15 ಪ್ರಸ್ತಾಪಗಳಲ್ಲಿ ಎಂಆರ್ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ – ಮೂವರಿಗೆ ಈ ಗೌರವ ನೀಡಲಾಗುತ್ತಿದೆ.
ಉದ್ಯಮಿಗಳಿಗೆ ಈ ಪದವಿಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಟೀಕೆಗಳು ವ್ಯಕ್ತವಾಗಿದ್ದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಹಾಗಾದರೆ, ಈ ಸಾವಿರ ಕೋಟಿ ವ್ಯವಹಾರಗಳುಲ್ಲ ಮೂವರು ಉದ್ಯಮಿಗಳು ಗೌರವ ಡಾಕ್ಟರೇಟ್ ಗಾಗಿ ಸ್ವತಹ ಅರ್ಜಿ ಸಲ್ಲಿಸಿದರೆ !, ಅಥವಾ ಅವರ ಸ್ಥಳೀಯ ಚಮಚಾ ರಾಜಕಾರಣಿಗಳು ಅರ್ಜಿ ತುಂಬಿದರೆ ? ಅರ್ಜಿ ಸಲ್ಲಿಸಿ ಗೌರವ ಡಾಕ್ಟರೇಟ್ ಪಡೆಯುವ ಅಗತ್ಯ ಸರಕಾರಗಳನ್ನೇ ಕುಣಿಸಬಲ್ಲ ಇಂತಹ ದೊಡ್ಡ ಉದ್ಯಮಿಗಳಿಗೆ ಏನಿತ್ತು? ಕುಲಪತಿ ಧರ್ಮ ಅವರ ಹೇಳಿಕೆ ಈ ಉದ್ಯಮಿಗಳಿಗೆ ದೊಡ್ಡ ಅವಮಾನವಲ್ಲವೆ ? ಸಮಾಜದಲ್ಲಿ ದೊಡ್ಡ ಹೆಸರಿರುವ ಈ ಉದ್ಯಮಿಗಳು ಇಂತಹ ಗೌರವ ಕಳೆದು ಕೊಂಡಿರುವ ಡಾಕ್ಟರೇಟ್ ಅನ್ನು ತಿರಸ್ಕರಿಸಿ ತಮ್ಮ ಗೌರವವನ್ನು ಕಾಪಾಡಿಕೊಳ್ಳಲಿ. ಮಂಗಳೂರು ವಿ ವಿ ಯಾವುದೋ ಖಾಸಗಿ ಫೇಕ್ ವಿ ವಿ ಮಟ್ಟಕ್ಕೆ ಇಳಿದಿರುವುದು ದುಃಖ ಉಂಟು ಮಾಡಿದೆ,” ಎಂದು ಹೇಳಿದ್ದಾರೆ.