News Karnataka Kannada
Saturday, May 11 2024
ಶಿವಮೊಗ್ಗ

ತೀರ್ಥಹಳ್ಳಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೌಡಿ ಶೀಟರ್ ಕೋಬ್ರಾ ಸುಹೇಲ್

Davanagere: Youth consumed poison after murdering woman, dies
Photo Credit : Pixabay

ತೀರ್ಥಹಳ್ಳಿ: ಗಡಿಪಾರು ಆದೇಶದ ಕಾರಣ ಕೇಳಿ ನೋಟೀಸ್ ನೀಡುತ್ತಿದ್ದಂತೆ ರೌಡಿ ಶೀಟರ್ ಕೋಬ್ರಾ ಸುಹೇಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಒಂದು ವಾರದ ಹಿಂದೆ ತೀರ್ಥಹಳ್ಳಿ ಪೊಲೀಸರು ರೌಡಿಶೀಟರ್ ಕೋಬ್ರಾ ಸುಹೇಲ್ ನಿಗೆ ಎರಡು ವರ್ಷ ಗಳ ಕಾಲ ಗಡಿಫಾರು ಯಾಕೆ ಮಾಡಬಾರದು ಎಂದು ಕಾರಣಕೇಳಿ ನೋಟೀಸ್ ಜಾರಿ ಮಾಡಿದ್ದರು. ಪೊಲೀಸ್ ನೋಟೀಸ್ ತಲುಪಿ ಎರಡು ದಿನಕ್ಕೆ ಆತ ಆತ್ಮಹತ್ಯೆಗೆ ಯತ್ನಿಸಿ ಈಗ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇಂದಿರಾ ನಗರ ನಿವಾಸಿ ಹಾಲಿ ಸಿಬಿನಕೆರೆ ಅಬ್ದುಲ್ ಖಾದರ್ ಸಾಬ್ ಪಾರ್ಕ್ ಹತ್ತಿರ ವಾಸವಾಗಿರುವ ಕೋಬ್ರಾ ಅಲಿಯಾಸ್ ಸುಹೇಲ್ ನ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತು ಮಳೂರು ಪೊಲೀಸ್ ಠಾಣೆಯಲ್ಲಿ, ಶಿವಮೊಗ್ಗ ಉಪ ವಿಭಾಗ ಅಧಿಕಾರಿಗಳು ಪೊಲೀಸ್ ಇಲಾಖೆಯ ಶಿಫಾರಸ್ಸು ಮೇಲೆ ಎರಡು ವರ್ಷಗಳ ಗಡಿಪಾರನ್ನು ಆದೇಶ ಮಾಡಲು ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಈ ನೋಟೀಸ್ ಗೆ ಉತ್ತರಿಸದೆ ಸುಹೇಲ್ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಾನೆ.

ವಿಷ ಸೇವನೆ ಮಾಡಿ ಗಂಭೀರ ಸ್ಥಿತಿಯಲ್ಲಿ ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಯಿಂದ, ಶಿವಮೊಗ್ಗ ಮೆಗ್ಗಾನ್, ಮೆಗ್ಗಾನ್ ನಿಂದ ಮಂಗಳೂರಿನ ಏನೋಪಾಯ ಆಸ್ಪತ್ರೆಗೆ ಕಳೆದ ಮೂರು ದಿನಗಳ ಹಿಂದೆ ದಾಖಲು ಮಾಡಲಾಗಿದೆ .ಆತನ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈತ ಸಿರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವಂತಹ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು.

 

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು