ಶಿವಮೊಗ್ಗ: ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳನ್ನ ಶಿವಮೊಗ್ಗಕ್ಕೆ ಕರೆತರಲಾಗಿದೆ. ತಡರಾತ್ರಿ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಶರಣಾದ 8 ಜನ ಆರೋಪಿಗಳನ್ನ ನಿನ್ನೆ ರಾತ್ರಿ 7.30 ರ ಸಮಯಕ್ಕೆ ಕರೆತರಲಾಯಿತು.
ಶಿವಮೊಗ್ಗದ ಜಯನಗರ ಠಾಣೆಗೆ ವಿನೋಬ ನಗರ ಠಾಣೆ ಪೊಲೀಸರು ಕರೆತಂದಿದ್ದಾರೆ. ಕಾರ್ತಿಕ್, ನಿತಿನ್, ಮಧುಸೂಧನ್, ಫಾರುಖ್, ಆಂಜನೇಯ, ಮದನ್, ಮಧು, ಚಂದನ್ ಶರಣಾಗಿರುವ ಆರೋಪಿಗಳನ್ನು ಕರೆ ತರಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾಳೆ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀ ಪ್ರಸಾದ್ ಚಿಕ್ಕ ಮಗಳೂರಿನಲ್ಲಿ ಯಾವ ಪ್ರಕರಣವೂ ಅವರ ಮೇಲೆ ಇಲ್ಲದ ಕಾರಣ ನಮಗೆ ನೇರವಾಗಿ ಚಿಕ್ಕಮಗಳೂರು ನ್ಯಾಯಾಲಯ ಹಸ್ತಾಂತರಿಸಲು ಸೂಚಿಸಿದೆ.
ಈ ಹಿನ್ನಲೆ ಯಲ್ಲಿ ಈ 8 ಜನರ ಬಂಧನ ಶಿವಮೊಗ್ಗದಲ್ಲಿಯೇ ಆಗಿದೆ ಎಂದು ತೋರಿಸಲಾಗುವುದು. 24 ಗಂಟೆಯ ಒಳಗೆ ಅವರ ತನಿಖೆ ನಡೆಸಿ ಮತ್ತೆ ನ್ಯಾಯಾಯದ ಮುಂದೆ ಹಾಜರಿ ಪಡಿಸಲಾಗುವುದು ಎಂದು ತಿಳಿಸಿರುವ ಡಾ.ಲಕ್ಷ್ಮೀ ಪ್ರಸಾದ್, ಶರಣಾದ 8 ಜನರಲ್ಲಿ ಇಬ್ಬರು ಹಾವೇರಿ ಜಿಲ್ಲೆ ಮತ್ತು ಹರಿಹರ ತಾಲೂಕಿನ ಗಡಿ ಪ್ರದೇಶಗಳ ನಿವಾಸಿಗಳಾಗಿದ್ದಾರೆ. ಒಬ್ಬ ಮಲವಗೊಪ್ಪದ ನಿವಾಸಿ ಉಳಿದವರು ಶಿವಮೊಗ್ಗದ ನಗರ ನಿವಾಸಿಯಾಗಿದ್ದಾರೆ ಎಂದರು.