News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ: ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು, ಓರ್ವನ ಬಂಧನ

Police crack theft case, arrest one person
Photo Credit : By Author

ಶಿವಮೊಗ್ಗ: ಎಗ್ಸಾಸ್ಟ್ ಫ್ಯಾನ್ ಮುರಿದು ಕಳ್ಳತನ ನಡೆಸಿದ್ದ ಆರೋಪಿಯನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದು 7,22,500 ರೂ. ಮೌಲ್ಯದ 144.50 ಗ್ರಾಂ ಚಿನ್ನಾಭರಣವನ್ನ ವಶಪಡಿಸಿಕೊಳ್ಳಲಾಗಿದೆ.

ನಿನ್ನೆಗೆ ಒಂದು ತಿಂಗಳು ಸರಿಯಾಗಿ ಅಣ್ಣಾನಗರದ ನಿವಾಸಿ ಬಸವರಾಜಪ್ಪ ಎಂಬುವರು ಹೊನ್ನಾಳಿಯ ಬಲಮುರಿಯಲ್ಲಿರುವ ತೋಟ ನೋಡಲು ಹೋದಾಗ ಮನೆಯಲ್ಲಿರುವ ಎಕ್ಸಾಸ್ಟ್ ಫ್ಯಾನ್ ಮುರಿದು ಮನೆಕಳ್ಳತನ ನಡೆಸಲಾಗಿತ್ತು. ನಗದು, ಮೊಬೈಲ್ ಟೈಟಾನ್ ವಾಚ್ ಮೊದಲಾದ ಒಟ್ಟು 31 ಸಾವಿರದ ರೂ ಮೌಲ್ಯದ ವಸ್ತುಗಳನ್ನ ದೋಚಿಕೊಂಡು ಹೋಗಿದ್ದನು. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಅದೇ ಬಡಾವಣೆಯ ಸದ್ದಾಂ.ಡಿ. ಎಂಬಾತನನ್ನ ಪೊಲೀಸರು ಬಂಧಿಸಿದ್ದು, ಈತನು ನಡೆಸಿರುವ 8 ಮನೆಗಳ್ಳ ಪ್ರಕರಣವನ್ನ ಪತ್ತೆ ಮಾಡಲಾಗಿದೆ. 144.50 ಗ್ರಾ ಚಿನ್ನ, ನಗದು 2 ಟಿವಿ ಮೊದಲಾದ ಬೆಲೆ ಬಾಳುವ ವಸ್ತುಗಳನ್ನ  ಪತ್ತೆ ಹಚ್ಚಲಾಗಿದೆ. 7,77,950 ರೂ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಪಿಎಸ್ಐ ವಂಸತ್, ಮಪಿಎಸ್ಐ, ಮಂಜಮ್ಮ,ಪ್ರೊ ಪಿಎಸ್ಐ ಕೃಷ್ಣಕುಮಾರ್ ಮಾನೆ, ಸೈಲ್ ಕೆಂಚಣ್ಣವರ್, ಎಎಸ್ಐ ಚಂದ್ರಶೇಖರ್ ಸಿಬ್ಬಂಧಿಗಳಾದ ಹೆಚ್.ಸಿ ಪಾಲಾಕ್ಷನಾಯ್ಕ್ ಮತ್ತು ಸಿ.ಪಿ.ಸಿ ಗುರುನಾಯ್ಕ್, ಶಶಿಧರ್ ಸಿ, ಚಂದ್ರಾನಾಯ್ಕ್, ಮನೋಹರ್, ನಿಥಿನ್, ರಮೇಶ್ ಒಳಗೊಂಡ ತಂಡ ಪ್ರಕರಣವನ್ನ‌ ಬೇಧಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು