News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ರಾಹುಲ್ ಗಾಂಧಿ ಪಿಎ ಹೆಸರಿನಲ್ಲಿ ನಕಲಿ ವ್ಯಕ್ತಿ ಕರೆ, ಶಾಸಕ ಯು.ಟಿ ಖಾದರ್ ದೂರು

Cong slams K'taka BJP President's 'focus on love jihad' remark
Photo Credit : News Kannada

ಮಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪಿಎ ಹೆಸರಿನಲ್ಲಿ ನಕಲಿ ವ್ಯಕ್ತಿ ಓರ್ವ ಮೊಬೈಲ್ ಕರೆ ಮಾಡಿ ಮತ್ತು ಸಂದೇಶ ಕಳಿಸಿರುವ ಬಗ್ಗೆ ಶಾಸಕ ಯುಟಿ ಖಾದರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜನವರಿ 2ರಂದು ಮಧ್ಯಾಹ್ನ 1:30ರ ವೇಳೆಗೆ 8146006626 ಮೊಬೈಲ್ ಸಂಖ್ಯೆಯಿಂದ ಎರಡು ಬಾರಿ ಕರೆ ಬಂದಿತ್ತು .ಸಭೆ ಒಂದರಲ್ಲಿ ಭಾಗವಹಿಸಿದ್ದರಿಂದ ಕರೆಯ ಸ್ವೀಕರಿಸಿರಲಿಲ್ಲ , ಸಭೆ ಮುಗಿಸಿ ಮೊಬೈಲ್ ನೋಡುವಾಗ ಸಂದೇಶ ಬಂದಿತ್ತು ಅದರಲ್ಲಿ ಕಾನಿಷ್ಕ ಸಿಂಗ್ ರಾಹುಲ್ ಗಾಂಧಿ ಪಿಎ ಕರೆ ಮಾಡಿ ಎಂಬುದಾಗಿ ಇತ್ತು . ಟ್ರೂ ಕಾಲರ್ ಮೂಲಕ ಪರಿಶೀಲಿಸಿದಾಗ ಆ ಮೊಬೈಲ್ ಸಂಖ್ಯೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಹೆಸರಿನಲ್ಲಿ ಸೇವ್ ಮಾಡಿರುವುದಾಗಿ ತಿಳಿಯಿತು.

ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದು ನಕಲಿ ವ್ಯಕ್ತಿ ಹೆಸರಿನಲ್ಲಿ ಬಂದ ಕರೆ ಎಂಬುದು ಮನವರಿಕೆಯಾಗಿದೆ ಹಾಗಾಗಿ ಕರೆ ಮಾಡಿದವರು ಯಾರು ಮತ್ತು ಯಾಕಾಗಿ ಎಂಬ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುಟಿ ಖಾದರ್ ಪೊಲೀಸ್ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು