News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗ: ಎಲ್ಲಾ ರೀತಿಯ ಭೂಮಿ ಹಕ್ಕು ಕೊಡಲು ಶ್ರಮಿಸಿದ್ದು ಕಾಂಗ್ರೆಸ್ ವಿನಃ ಬಿಜೆಪಿ ಅಲ್ಲ

t was the Congress, not the BJP, that worked hard to give all kinds of land rights.
Photo Credit : By Author

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಕಾಗೋಡು ಶ್ರಮಿಸಿಲ್ಲವೆಂದು ನಿನ್ನೆ ಸಂಸದ ಬಿವೈ ರಾಘವೇಂದ್ರ ಸುದ್ದಿಗೋಷ್ಠಿ ನಡೆಸಿರುವ ಬಗ್ಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಸಂಸದರಿಂದ ಈ ರೀತಿಯ ಹೇಳಿಕೆಯನ್ನ ನಿರೀಕ್ಷಿಸಿರಲಿಲ್ಲ ಎಂದು ಬಣ್ಣಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಎಂಎಲ್ ಸಿ, 2015 ರಿಂದ ಅಧಿಕಾರಿಗಳ ಸಮಿತಿ ರಚಿಸಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಸತತ ಎರಡು ವರ್ಷ ಸಭೆ ನಡೆಸಿರುವುದು ಕಾಗೋಡು ತಿಮ್ಮಪ್ಪನವರು. 94, 94_ ಸಿಸಿ ಕಾಯ್ದೆ ಜಾರಿಗೊಂಡಿದ್ದು ಕಾಗೋಡು ಅವರ ಆಸಕ್ತಿಯಿಂದಲೇ ಎಂದರು.

ಎಲ್ಲಾ ರೀತಿಯ ಭೂಮಿ ಹಕ್ಕು ಕೊಡಲು ಶ್ರಮಿಸಿದ್ದು ಕಾಂಗ್ರೆಸ್ ವಿನಃ ಬಿಜೆಪಿ ಅಲ್ಲ. ಶಿಕಾರಿಪುರ ಮತ್ತು ಶಿವಮೊಗ್ಗದ ಭೂಮಿ ಹಕ್ಕು ಪತ್ರನೀಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸದ ರಾಘವೇಂದ್ರ ಅಂದು ಕಾಗೋಡನ್ನ ಹಾಡಿಹೊಗಳಿದ್ದರು.

ಆದರೆ ಈಗ ಕಾಗೋಡು ಏನೂ ಮಾಡಿಲ್ಲವೆಂದು ಹೇಳಿರುವುದು ದಿಗ್ಭ್ರಮೆ ತಂದಿದೆ. ಡಿನೋಟಿಫೀಕೇಷನ್ ನನ್ನ ಕೋರ್ಟ್ ರದ್ದುಗೊಳಿಸಲು ನಿಮ್ಮ ಸರ್ಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ. 2017 ರಂದು ಜಾರಿಗೆ ತಂದ 56 ನೋಟಿಫಿಕೇಷನ್ ನನ್ನ ರದ್ದುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಚುನಾವಣೆ ಬಂದಾಗ ತಾತ್ಕಾಲಿಕ ರೇಷನ್ ಕಾರ್ಡ್ ನೀಡಿ ಚುನಾವಣೆ ಎದುರಿಸಿದ ಘಟನೆಗಳು ನಡೆದಿದ್ದವು. ಕಾಂಗ್ರೆಸ್ ಹಾಗೆ ಮಾಡಿಲ್ಲ ಪ್ರಾಮಾಣಿಕ ಚುನಾವಣೆ ನಡೆಸಿಕೊಂಡು ಬಂದ ಹಿನ್ನಲೆ ಇದೆ ಎಂದು ವಿವರಿಸಿದರು.

ನ.10 ರಂದು ಶರಾವತಿ ಮುಳುಗಡೆ ಸಂತ್ರಸ್ತರ ಪೂರ್ವ ಸಭೆ ನಡೆಸಿದ ಮೇಲೆ ಎಚ್ಚೆತ್ತುಕೊಂಡ ಬಿಜೆಪಿ ಚುನಾವಣೆ ಹತ್ತಿರವಿದೆ ಎಂದು ನಮ್ಮ ಪೂರ್ವಭಾವಿ ಸಭೆ ನಡೆಸಿ ಮೂರೇ ದಿನಕ್ಕೆ ಮತ್ತೆ ಸಭೆ ನಡೆಸಿ ಮುಖ್ಯಮಂತ್ರಿಗಳನ್ನ ಕರೆಯಿಸಿದರು. ಮುಖ್ಯಮಂತ್ರಿಗಳ ಸಭೆಯಲ್ಲಿ ಜನ ಇಲ್ಲದಿರುವುದು ಕಂಡುಬಂದಿತು.

ನಮ್ಮ ಜನಾಕ್ರೋಶದ ಪಾದಯಾತ್ರೆಯಲ್ಲಿ ಜನರನ್ನ ಕಂಡು ಬಿಜೆಪಿ ನಡುಕ ಹುಟ್ಟಿಸಿಕೊಂಡು ನಿನ್ನೆ ಸಂಸದರು ಸುದ್ದಿಗೋಷ್ಠಿ ನಡೆಸಿದರು. ಈ‌ ರೀತಿಯ ಚುನಾವಣೆ ಗಿಮಿಕ್ ಬಗ್ಗೆ ಜನೆಚ್ಚೆತ್ತುಕೊಂಡಿದ್ದಾರೆ ಎಂದು ಗುಡುಗಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು