News Karnataka Kannada
Monday, May 06 2024
ಶಿವಮೊಗ್ಗ

ಶಿವಮೊಗ್ಗ: ತರಕಾರಿ ಮಾರಲು ಹೋದ ಅನ್ಯ ಕೋಮಿನ ಯುವಕರ ಮೇಲೆ ಹಲ್ಲೆ

Youths from other communities attacked when they went to sell vegetables
Photo Credit : News Kannada

ಶಿವಮೊಗ್ಗ: ತರಕಾರಿ ಮಾರಲು ಹೋದ ಅನ್ಯ ಕೋಮಿನ ಯುವಕರ ಮೇಲೆ ನ್ಯೂ ಮಂಡ್ಲಿಯಲ್ಲಿ ಹಲ್ಲೆ ನಡೆಸಲಾಗಿದೆ. ಆಟೋದಲ್ಲಿ ತರಕಾರಿ ಮಾರಲು ಬಂದ ಇಬ್ಬರು ಯುವಕರು ಮತ್ತು ನೋಡಲು ಬಂದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ.

ಲಗೇಜ್ ಆಟೋದಲ್ಲಿ ತರಕಾರಿ ಮಾರಲು ಬಂದ ಇಬ್ಬರು ಯುವಕರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲಾಗಿದೆ. ಏನು ಗಲಾಟೆ ಆಗುತ್ತಿದೆ ಎಂದು ನೋಡಲು ಬಂದ ಯುವಕ ಮೇಲೂ ಹಲ್ಲೆ ಮಾಡಲಾಗಿದೆ.

ಹಳೇ ಮಂಡ್ಲಿಯ ಇಬ್ಬರು ಯುವಕರು ನ್ಯೂ ಮಂಡ್ಲಿಯಲ್ಲಿ ಕಳೆದ ಐದಾರು ವರ್ಷಗಳಿಂದ ತರಕಾರಿ ಮಾರುತ್ತಿದ್ದಾರೆ. ತರಕಾರಿ ಮಾರಲು ಬಂದ ಯುವಕರನ್ನ ಅವಹೇಳನ ಮಾಡಿ ಆಟೋದಲ್ಲಿ ಅಳವಡಿಸಲಾದ ಗ್ಯಾಸ್ ಗೆ ಕಿಡಿಗೇಡಿಗಳು ಪಟಾಕಿ ಇಟ್ಟು ಸಿಡಿಸಿದ್ದಾರೆ ಎಂದು ಹಲ್ಲೆಗೊಳಗಾದ ಯುವಕರ ಕಡೆಯವರು ಆರೋಪಿಸಿದ್ದಾರೆ.

ನಾಲ್ಕೈದು ಜನ ಕೈಯಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಯುವಕರ ಮಾತುಗಳನ್ನ ಕೇಳಿ ಸ್ಥಳೀಯರು ಒಟ್ಟು ಸೇರಿದ್ದಾರೆ. ಸ್ಥಳೀಯ ಮಹಿಳೆಯರು ರಕ್ಷಣೆ ಮಾಡಿ ಯುವಕರನ್ನ ವಾಪಾಸ್ ಕಳುಹಿಸಲಾಗಿದೆ. ಗಲಾಟೆ ಏನಾಗುತ್ತಿದೆ ಎಂದು ನೋಡಲು ಬಂದವನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ

ಹಲ್ಲೆಗೊಳಗಾದ ಯುವಕರನ್ನ ಹಳೇ ಮಂಡ್ಲಿಯ ಸಯ್ಯದ್ ರಹೀಮ್ (23), ಮಹ್ಮದ್ ಶೋಯಬ್ (24) ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ತರಕಾರಿ ಮಾರಲು ಬಂದವರಾಗಿದ್ದಾರೆ. ಗಲಾಟೆ ನೋಡಲು ಹೋದ ಅಬ್ದುಲ್ ರೆಹಮಾನಿಗೆ ಮೂಗಿಗೆ ಹೊಡೆತ ಬಿದ್ದಿದೆ. ಸಧ್ಯಕ್ಕೆ ಮೂವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲವೆಂದು ತಿಳಿದು ಬಂದಿದೆ. ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು