ಶಿವಮೊಗ್ಗ: ಶಿವಮೊಗ್ಗ ಟೌನ್ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಬಜಾರ್ ನ ತರಕಾರಿ ಮಾರುಕಟ್ಟೆಯ ಹತ್ತಿರ ಮನೆಯ ಕಡೆ ಹೋಗುತ್ತಿದ್ದ ಪ್ರೇಮ್ ಸಿಂಗ್, 20 ವರ್ಷ, 5ನೇ ಕ್ರಾಸ್ ಅಶೊಕ ರಸ್ತೆ, ಶಿವಮೊಗ್ಗ ರವರಿಗೆ ಚಾಕುವಿನಿಂದ ಹಲ್ಲೆ ಮಾಡಿದ ಬಗ್ಗೆ ಗುನ್ನೆ ಸಂಖ್ಯೆ 334/2022 ಕಲಂ 307 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿತರಾದ ನದೀಮ್ ಮತ್ತು ಅಬ್ದುಲ್ ರೆಹಮಾನ್ ರವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
ನಂತರ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆಯ ಸಮಯದಲ್ಲಿ ದಿನಾಂಕ 16-08-2022 ರಂದು ಬೆಳಗಿನ ಜಾವ ಆರೋಪಿತನಾದ ಮೊಹಮ್ಮದ್ ಜಬೀ @ ಚರ್ಬಿ, 30 ವರ್ಷ, ಮಾರ್ನಾಮಿ ಬೈಲು, ಶಿವಮೊಗ್ಗ ಈತನು ಪೊಲೀಸ್ ಸಿಬ್ಬಂಧಿಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ಶ್ರೀ ಮಂಜುನಾಥ್ ಎಸ್ ಕುರಿ. ಪಿಎಸ್ಐ ವಿನೋಬನಗರ ಪೊಲೀಸ್ ಠಾಣೆ ರವರು ತಮ್ಮ ಮತ್ತು ಸಿಬ್ಬಂಧಿಗಳ ಆತ್ಮ ರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಸೇವಾ ಪಿಸ್ತೂಲ್ ನಿಂದ ಗುಂಡು ಹಾರಿಸಿರುತ್ತಾರೆ.
ನಂತರ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ದೊಡ್ಡಪೇಟೆ ಠಾಣೆಯಲ್ಲಿ ಗುನ್ನೆ ಸಂಖ್ಯೆ 0337/2022 ಕಲಂ 353, 307 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.