ಶಿವಮೊಗ್ಗ: ಈಶ್ವರಪ್ಪ ಅವರ ಮನಃಸ್ಥಿತಿಯ, ಅವರದ್ದೇ ವೈಚಾರಿಕತೆಯ, ಸಿದ್ಧಾಂತದ ವ್ಯಕಿ ಚನ್ನಬಸಪ್ಪ ಎಂದು ಜೆಡಿ ಎಸ್ ಉಮೇದುವಾರ ಆಯನೂರು ಮಂಜುನಾಥ ಹೇಳಿದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗಿಂತ ಹೆಚ್ಚೇ ಎನ್ನಬಹುದಾಧ, ತೋಚಿದಂತೆ ಮಾತನಾಡುವ ಬಿಜೆಪಿ ಉಮೇದುವಾರ ಚನ್ನಬಸಪ್ಪ. ಈಶ್ವರಪ್ಪ ಅವರ ತದ್ರೂಪ ಎನ್ನಬಹುದು. ಅವರನ್ನು ಘೋಷಿಸುವುದಾದರೆ ಇಷ್ಟು ದಿನ ಕಾಯುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.
ಶಿವಮೊಗ್ಗ ನಿಷೇಧಾಜ್ಞೆರಹಿತ ನಗರವಾಗಬೇಕು. ಶಾಂತಿ, ಸೌಹಾರ್ದತೆ, ಸಹಬಾಳ್ವೆ ನೆಲೆಸಬೇಕು. ಒಡೆದಿರುವ ಮನಸ್ಸಿಗೆ ಹೊಲಿಗೆ ಹಾಕುವ ಕೆಲಸ ಮಾಡುವೆ ಎಂದರು.
ನಾನು ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ನಗರದ ಜನತೆ ಬದಲಾವಣೆ ಬಯಸಿದ್ದಾರೆ. ಹೊಸ ರಾಜಕೀಯದ ನೀರು ಹರಿಯಬೇಕೆಂದು ಯೋಚಿಸಿದ್ದಾರೆ. ಈ ಎಲ್ಲ ಬದಲಾವಣೆಗೆ ಮುಕ್ತ ಮನಸ್ಸಿನಿಂದ ಜನ ತಯಾರಾಗಿದ್ದಾರೆ ಎಂದರು.
ಎಂ. ಶ್ರೀಕಾಂತ್, ಶಾರದಾ ಪೂರ್ಯಾ ನಾಯ್ಕ್, ರಾಮಕೃಷ್ಣ ಜತೆಗಿದ್ದರು.