ಶಿವಮೊಗ್ಗ: ಮಗಳ ಮದುವೆಗೆ ಹಣ ಬೇಕೆಂದು ಕಾರ್ಕಳದಲ್ಲಿರುವ ಒಂದು ಎಕರೆ ಜಮೀನು ಮಾರಾಟಕ್ಕಿದೆ ಗಾಡಿಕೊಪ್ಪದ ಅಮೃತ ಲೇಔಟ್ ನ ನಿವಾಸಿ ಎಸ್.ರಂಗಪ್ಪ ಎಂಬ 70 ವರ್ಷದ ವೃದ್ಧ ದ.ಕ.ದ ಪ್ರಮುಖ ಪತ್ರಿಕೆಯಲ್ಲಿ ಜಾಹೀರಾತು ಹಾಕಿರುತ್ತಾರೆ. ಇದನ್ನ ನೋಡಿ ಜಮೀನು ಖರೀದಿಯ ನೆಪದಲ್ಲಿ ಮಂಗಳೂರಿನಿಂದ ನಿಮ್ಮ ಆಸ್ತಿ ಖರೀದಿಸಲು ಬಂದಿರುವುದಾಗಿ ಸುಂದರ್ ಮತ್ತು ಮಹೇಶ್ ಎಂಬುವರು ರಂಗಪ್ಪನವರ ಮನೆಗೆ ಬಂದಿರುತ್ತಾರೆ.
ಪರಿಚಯ ಮಾಡಿಕೊಂಡ ಸುಂದರ್ ಜಮೀನು ಯಾಕೆ ಮಾರಾಟ ಮಾಡುತ್ತಿದ್ದೀರ ಎಂದು ಕೇಳಿದ್ದಾರೆ. ಮಗಳ ಮದುವೆಗೆ ಹಣಬೇಕು ಮಾರಾಟ ಮಾಡ್ತಾ ಇದ್ದೀನಿ ಎಂದು ಹೇಳಿದ್ದಾರೆ. 6 ಲಕ್ಷ ರೂ. ಹೊಂದಿಸಿಕೊಳ್ಳಿ ನಾನು ನಿಮಗೆ 25 ಲಕ್ಷ ರೂ. ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ನಾವು ಪುನಃ ಬರುವುದಾಗಿ ಹೇಳಿ ಹೋಗಿದ್ದಾರೆ.
ಬ್ಲಾಕ್ ನೋಟ್ ನಿಂದ ಗರಿ ಗರಿ 500 ರೂ. ತಯಾರಿಕೆ!
ಸುಂದರ್ ಕರೆ ಮಾಡಿ ಮೈಸೂರಿಗೆ ಬನ್ನಿ ಎಂದು ತಿಳಿಸಿದ್ದು, ನ.30 ರಂದು ರಂಗಪ್ಪ ಮೈಸೂರಿಗೆ ತೆರಳಿದ್ದಾರೆ. ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಖುದ್ದು ಬಂದ ಸುಂದರ್ ರಂಗಪ್ಪನವರನ್ನ ಕಾರಿನಲ್ಲಿ ಕೂರಿಸಿಕೊಂಡು ಎರಡು ಕಿಮಿದೂರ ಕರೆದುಕೊಂಡು ಹೋಗಿ ಬ್ಲಾಕ್ ನೋಟ್ ಗಳನ್ನ ಕೆಮಿಕಲ್ ಗೆ ಅದ್ದಿ ಮೂರು ಹೊಸ 500 ರೂ. ನೋಟು ತಯಾರಿಸಿ ತೋರಿಸಿದ್ದಾರೆ. ಇದರಿಂದ ರಂಗಪ್ಪ ಖುಷಿಯಾಗಿದ್ದಾರೆ.
6 ಲಕ್ಷಕ್ಕೆ ಚಿನ್ನಾಭರಣಗಳ ಒತ್ತೆ
ನೀವು 6 ಲಕ್ಷ ರೂ. ಸಿದ್ದಪಡಿಸಿಕೊಳ್ಳಿ ನಾವು ಶಿವಮೊಗ್ಗಕ್ಕೆ ಬಂದು 25 ಲಕ್ಷ ರೂ ಮಾಡಿಕೊಡುತ್ತೇವೆಂದು ಸುಂದರ್ ನಂಬಿಸಿದ್ದಾನೆ. ಡಿ.1ಕ್ಕೆ ಬಂದ ರಂಗಪ್ಪ ಮರುದಿನ ಮುತ್ತೂಟ್ ಫೈನಾನ್ಸ್ ನಲ್ಲಿ ಚಿನ್ನಾಭರಣಗಳನ್ನ ಅಡವಿಟ್ಟು 6ಲಕ್ಷ ರೂ. ಸಿದ್ದಪಡಿಸಿಕೊಂಡಿದ್ದಾರೆ. 6 ಲಕ್ಷ ರೂ. ಸಿದ್ದವಿದೆ ಬನ್ನಿ ಎಂದ ತಕ್ಷಣವೇ ಲಗ್ಗೇ ಇಟ್ಟ ಸುಂದರ್ ನೇರವಾಗಿ ರಂಗಪ್ಪನವರ ನಿವಾಸವಿರುವ ಗಾಡಿಕೊಪ್ಪಕ್ಕೆ ಆತನ ಕಾರು ನೇರವಾಗಿ ಬಂದಿರುತ್ತದೆ.
ರಂಗಪ್ಪನವರ ಬಳಿ 6 ಲಕ್ಷ ಸ್ವೀಕರಿಸಿ ಕೆಮಿಕಲ್ ತರೋಣವೆಂದು ರಂಗಪ್ಪನವರನ್ನ ಕಾರಿನಲ್ಲಿ ಕೂರಿಸಿಕೊಂಡು ಕೆಮಿಕಲ್ ತರಲು ಎಂ ಆರ್ ಎಸ್ಗೆ ಬಂದಿಳಿದಿದ್ದಾರೆ. ಎಂಆರ್ ಎಸ್ ನ ಶಾಪ್ ನಲ್ಲೂ ತಾವು ಕೇಳಿದ ಕೆಮಿಕಲ್ ಇಲ್ಲವೆಂದು ಸುಂದರ್ ರಂಗಪ್ಪನವರನ್ನ ಇಳಿಸಿ ನಾವು ಬೆಂಗಳೂರಿಗೆ ಹೋಗಿ ಕೆಮಿಕಲ್ ತರುವುದಾಗಿ ಹೇಳಿ ಹೋಗಿದ್ದಾರೆ.
15 ದಿನವಾದರೂ ಬಾರದ ಆಸಾಮಿ!
ಕಣ್ಣೆದುರು ಹಣ ಕಳೆದುಕೊಳ್ಳುತ್ತೇನೆ ಎಂದು ತಿಳಿದಿದ್ದರೂ ರಂಗಪ್ಪ ಅಸಾಹಯಕರಾಗಿ ನಿಂತಿದ್ದರು. ಒಂದೇ ಒಂದು ಜಾಹೀರಾತು ರಂಗಪ್ಪನವರನ್ನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಡಿ.2 ರಂದು ರಂಗಪ್ಪನವರ ಬಳಿ ಮೋಸದಿಂದ ಪಡೆದ ಹಣವನ್ನ ಸುಂದರ್ ಮತ್ತೆ ಶಿವಮೊಗ್ಗದ ಕಡೆ ಮೊಖ ಹಾಕಲಿಲ್ಲ.