ಶಿವಮೊಗ್ಗ: ಮೆಗ್ಗಾನ್ ನಲ್ಲಿ ಡ್ಯೂಟಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಮೃತ ಅಬ್ದುಲ್ ರಸೀದ್ ಕಡೆಯವರನ್ನ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಯನ್ನ ಮಮ್ತಕೀಮ್ ಎಂದು ಹೇಳಲಾಗುತ್ತಿದೆ.
ಎರಡು ಮೂರು ದಿನಗಳ ಹಿಂದೆ ಆಯನೂರಿನ ರಸ್ತೆ ಅಪಘಾತದಲ್ಲಿ ಪೀಡ್ಸ್ ನಿಂದ ಅಪಘಾತಕ್ಕೊಳಗಾದ ಅಬ್ದುಲ್ ರಸೀದ್ ಎಂಬ 65 ವರ್ಷದ ವೃದ್ಧರನ್ನ ಮೆಗ್ಗಾನ್ ನಲ್ಲಿ ಕರೆತಂದು ದಾಖಲಿಸಲಾಗಿತ್ತು.
ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎಜಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರನ್ನ ಮತ್ತೆ ಮೆಗ್ಗಾನ್ ಗೆ ಕರೆತರಲಾಗಿತ್ತು. ಭಾನುವಾರ ರಾತ್ರಿ ಅಬ್ದುಲ್ ರಸೀದ್ ಅಸುನೀಗಿರುವುದು ಮೆಗ್ಗಾನ್ ವೈದ್ಯರ ನಿರ್ಲಕ್ಷದಿಂದ ಎಂದು ಆರೋಪಿಸಿ ಮೃತನ ಸಂಬಂಧಿಕರು ಮಹಿಳಾ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವಿಚಾರವಾಗಿ ಮುಮ್ತಕೀನ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದತಕ್ಷಣ ಡ್ಯೂಟಿ ಮಾಡುತ್ತಿದ್ದ ವೈದ್ಯರೆಲ್ಲಾ ಕರ್ತವ್ಯ ತ್ಯಜಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಡೀನ್ ಡಾ.ವಿರುಪಾಕ್ಷಪ್ಪ, ಮೆಗ್ಗಾನ್ ಅಧೀಕ್ಷಕ ಡಾ.ಶ್ರೀಧರ್ ಮೊದಲಾದವರು ಸ್ಥಳಕ್ಕೆ ಧಾವಿಸಿದ್ದಾರೆ.
ಡ್ಯೂಟಿ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು, ಸಿಬ್ಬಂದಿಗಳ ಕೊರತೆಯನ್ನನೀಗಿಸಬೇಕು ಸೇರಿದಂತೆ ಮುಷ್ಕರ ನಿರತ ವೈದ್ಯರು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ವೈದ್ಯರ ಒತ್ತಾಸೆಯ ಮೇರೆಗೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲು ಕೆಲವು ನಿರ್ಧಾರವನ್ನ ಕೈಗೊಳ್ಳಲಾಗಿದೆ.
ಗೃಹರಕ್ಷಕ ದಳ ನೇಮಿಸಿಕೊಳ್ಳಲು ನಿರ್ಧಾರ
ಡ್ಯೂಟಿ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸರ ಬದಲಿಗೆ ಗೃಹರಕ್ಷಕ ದಳದವರನ್ನ ನೇಮಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಮೆಗ್ಗಾನ್ ಆಡಳಿತ ಮಂಡಳಿ ಬಂದಿದೆ. ಇದು ಸೆಕ್ಯೂರಿಟಿ ಗಾರ್ಡ್ ಗಳ ಮೇಲೆ ತೂಗುಗತ್ತಿಯಾಗಲಿದೆಯಾ ಕಾದು ನೋಡಬೇಕಿದೆ.
ಕೊರತೆಯಿರುವ ಸಿಬ್ವಂದಿಗಳನ್ನ ತಕ್ಷಣವೇ ನೇಮಿಸಿಕೊಳ್ಳಲು ಸಹ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಯಾರು ಯಾರ ತಲೆದಂಡವಾಗಲಿದೆ. ಯಾರು ಯಾರು ಹೊಸ ನೇಮಕಾತಿಯೊಡನೆ ಒಳಗೆ ಬರಲಿದ್ದಾರೆ ಕಾದುನೋಡಬೇಕಿದೆ.