ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲಿನಲ್ಲಿ ನಿಲ್ಲಿಸಿದ್ದ ತಮ್ಮ ಟೊಯೋಟಾ ಯಾರಿಸ್ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಚಂದ್ರುಕುಮಾರ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ಕೈಗೊಂಡ ಮಂಜುನಾಥ್ ಬಿ ಪಿಐ ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ ದೂದ್ಯಾನಾಯ್ಕ್ ಪಿಎಸ್ಐ, ಮನೋಹರ್ ಎಎಸ್ಐ, ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಸಿಪಿಸಿ ನಾಗಪ್ಪ ಎ, ಹರೀಶ್ ನಾಯ್ಕ ಮತ್ತು ಹರಿಹಂತ ಶಿರಹಟ್ಟಿ ರವರುಗಳನ್ನೊಳಗೊಂಡ ತಂಡವು ಆರೋಪಿತರಾದ 1)ಚಂದ್ರುಕುಮಾರ್,2) ಪ್ರಶಾಂತ್ ಜಿ, ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಯಾದ ಚಂದ್ರುಕುಮಾರ್ ಈತನು ಸದರಿ ಪ್ರಕರಣದ ಪಿರ್ಯಾದಿಯಾಗಿದ್ದು, ಆರೋಪಿಯಾದ ಪ್ರಶಾಂತ್ ಜಿ ಈತನೊಂದಿಗೆ ಸೇರಿ ಒಳಸಂಚು ರೂಪಿಸಿಕೊಂಡು ತನ್ನ ಕಾರಿನ ಮೇಲಿದ್ದ ಲೋನ್ ಅನ್ನು ಕಟ್ಟದೇ ಫೈನಾನ್ಸ್ ಗೆ ಮೋಸ ಮಾಡುವ ಮತ್ತು ಕಾರಿನ ಇನ್ಸೂರೆನ್ಸ್ ಪಡೆಯುವ ಸಲುವಾಗಿ ತನ್ನ ಮಾಲೀಕತ್ವದ ಟೊಯೋಟಾ ಯಾರಿಸ್ ಕಾರನ್ನು ಪ್ರಶಾಂತ್ ಜಿ ಗೆ ನೀಡಿ ದಾವಣಗೆರೆಗೆ ಕಳುಹಿಸಿಕೊಟ್ಟು ನಂತರ ಸದರಿ ಕಾರ್ ನಂಬರ್ ಪ್ಲೇಟ್ ಅನ್ನು ಬದಲಾವಣೆ ಮಾಡಿಸಿ ಆರೋಪಿ ಚಂದ್ರುಕುಮಾರ್ ನು ಠಾಣೆಗೆ ಬಂದ ತನ್ನ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುವುದು ವಿಚಾರಣೆಯಲ್ಲಿ ಕಂಡು ಬಂದಿರುತ್ತದೆ. ನಂತರ ಸದರಿ ಪ್ರಕಣದ ಟೊಯೋಟಾ ಯಾರಿಸ್ ಕಾರನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಕರಣದ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಿಸಿರುತ್ತಾರೆ.