ಕೊಪ್ಪಳ: ಮತದಾರರ ಮತಗಳನ್ನ ಬಿಜೆಪಿ ಕಳ್ಳತನ ಮಾಡುವ ಕೆಲಸ ಮಾಡಿದ್ದಾರೆ. ಆದರೆ ಅವರು ನ್ಯಾಯಾಂಗ ತನಿಖೆ ಮಾಡಿಸಲು ಒಪ್ಪುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಗೆ ಸೋಲುವೆವು ಎನ್ನುವ ಭಯ ಶುರುವಾಗಿದೆ. ಆದರೆ 28 ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲೀಟ್ ಮತ್ತು ಸೇರ್ಪಡೆ ಮಾಡಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 50-60 ಸಾವಿರ ಜನರ ಹೆಸರು ಡಿಲೀಟ್ ಮಾಡಿದ್ದಾರೆ. ಅವರಿಗೆ ಮತ ಹಾಕಲ್ಲ ಎನ್ನುವವರನ್ನ ನೋಡಿ ಡಿಲೀಟ್ ಮಾಡಿದ್ದಾರೆ ಎಂದರು.
ಅಹಿಂದ ವರ್ಗದವರ ಮತ ಡಿಲೀಟ್ ಆಗಿವೆ. ಅದಕ್ಕೆ ನಾವು ಇದನ್ನು ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೇವೆ ಎಂದರು.