ಶಿವಮೊಗ್ಗ: ರಾಯಲ್ ಆರ್ಕಿಡ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಿಡೀರ್ ನೇ ಹಲ್ಲೆ ನಡೆಸಿ ಮೊನಚಾದ ಆಯುಧದಿಂದ ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ.
ಅ.30 ರಂದು ಭಾನುವಾರ ಸಂಜೆ ಗಾಂಧಿ ಬಜಾರ್ ನ ಶಿವಾಜಿ ರಸ್ತೆಯಿಂದ ನಡೆದುಕೊಂಡು ಬಂದಿದ್ದ ಅಶೋಕ್ ಪ್ರಭುವಿಗೆ ಎದುರಿನಿಂದ ಬಂದ ಯುವಕನೋರ್ವ ಭುಜಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕಣ್ಣು ಕಾಣಿಸೊಲ್ವಾ ಎಂದು ಸ್ಥಳದಲ್ಲಿ ಗಲಾಟೆ ಮಾಡಿದ್ದಾನೆ. ಈ ವೇಳೆ ದಿಡೀರನೇ ಇತರೆ ಮೂವರು ಕಿರಿಕ್ ತೆಗೆದ ಯುವಕನೊಂದಿಗೆ ಸೇರಿಕೊಂಡು ಪ್ರಭುವಿನ ಮುಖಕ್ಕೆ ಭಾರಿಸಿದ್ದಾರೆ.
ಆತನ ಹೊಡೆತ ಪ್ರಭುವಿನ ಮುಖದ ಗಲ್ಲ ಬಳಿ ಕೊಯ್ದಂಗೆ ಆಗಿ ರಕ್ತಗಾಯಗೊಂಡಿರುತ್ತದೆ. ಅದರಂತೆ ಇತರೆ ಎರಡು ಮೂರು ಕಡೆ ರಕ್ತಗಾಯಗಳಾಗಿದ್ದು ಪ್ರಭುವನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಈ ಮೊದಲು ಶೋ ರೂಮ್ ನಲ್ಲಿ ಎಕ್ಸಿಕ್ಯುಟಿವ್ ಆಗಿದ್ದ ಪ್ರಭು ಅನಾರೋಗ್ಯದ ಹಿನ್ನಲೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು.
ಮೊನ್ನೆ ಭಾನುವಾರ ಈ ಘಟನೆ ಅವರಿಗೂ ಮತ್ತು ಕುಟುಂಬಕ್ಕೆ ಆಘಾತವುಂಟು ಮಾಡಿತ್ತು. ಈಗ ಘಟನೆ ನಡೆದು ಐದು ದಿನದ ನಂತರ ಆರೋಪಿ ಓರ್ವನನ್ನ ಸೆರೆಹಿಡಿಯಲಾಗಿದೆ. ಪ್ರಕರಣದ ಎರಡನೇ ಆರೋಪಿ ಆಸೀಫ್ (26) ನನ್ನ ಬಂಧಿಸಲಾಗಿದೆ. ಈತ ಸಾಗರದ ನಿವಾಸಿಯಾಗಿರುವುದು ತಿಳಿದು ಬಂದಿದೆ.
ಈ ಅಪರಾಧದಲ್ಲಿ ಒಬ್ಬ ಆರೋಪಿಯು ಪುರ್ಲೆ ರಸ್ತೆಯ ರಾಶಿ ಡೆವಲಪರ್ಸ್ ಹೊಸದಾಗಿ ಅಭಿವೃದ್ಧಿಪಡಿಸಿದ ಸೈಟ್ ಪ್ರದೇಶದಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಇತ್ತು. ವಸಂತ್ ನೇತೃತ್ವದ ನಮ್ಮ ತಂಡ ಪಿಎಸ್ಐ ದೊಡ್ಡಪೇಟೆ, ಅವರನ್ನು ಹಿಡಿಯಲು ಹೋದಾಗ ಅವರು ನಮ್ಮ ಸಿಬ್ಬಂದಿ ರಮೇಶ್ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ. ತನ್ನ ಜೀವವನ್ನು ಉಳಿಸಲು ಮತ್ತು ಆತ್ಮರಕ್ಷಣೆಗಾಗಿ ಅವನು ಅಸ್ಲಾಂನ ಬಲಗಾಲಿನ ಮೇಲೆ ಗುಂಡು ಹಾರಿಸಿದನು. ಜಗಳದಲ್ಲಿ ನಮ್ಮ ಸಿಬ್ಬಂದಿ ಕೂಡ ಸ್ವಲ್ಪ ಗಾಯಗೊಂಡರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ಲಾಂ ಹಿಂದಿನ 9 ಪ್ರಕರಣಗಳನ್ನು ಹೊಂದಿದ್ದು, ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ ಎಂದು ಎಸ್ ಪಿ ಹೇಳಿದ್ದಾರೆ.