ಶಿವಮೊಗ್ಗ: ಲವ ಹಾಗೂ ಕುಶನನ್ನು ಹತ್ಯೆ ಮಾಡಿ ಭೂಗತ ಲೋಕಕ್ಕೆ ಕಾಲಿಟ್ಟಿದ್ದ ಹಂದಿ ಅಣ್ಣಿಯನ್ನು ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಇನ್ನೋವಾ ಕಾರಿನಲ್ಲಿ ಬಂದ ಆರೇಳು ಜನರ ತಂಡ ವಿನೋಬನಗರ ಚೌಕಿ ಬಳಿ ರೌಡಿಶೀಟರ್ ಹಂದಿ ಅಣ್ಣಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಹಂದಿ ಅಣ್ಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಕಳೆದ ಒಂದೂಬರೆ ವರ್ಷ್ ಹಿಂದೆ ಹಂದಿ ಅಣ್ಣಿಯ ಸಹೋದರ ಗಿರೀಶ್ ನನ್ನ ಮರ್ಡರ್ ಮಾಡಲಾಗಿತ್ತು. ಗೋಪಾಳದಲ್ಲಿ ತೂರುವ ಬಿಲ್ಲೆ ವಿಚಾರದಲ್ಲಿ ನಸ್ರೂ ಗ್ಯಾಂಗ್ ಗಿರಿಯನ್ನ ಮರ್ಡರ್ ಮಾಡಿತ್ತು. ಈ ವಿಚಾರದಲ್ಲಿ ನಸ್ರೂ ಮತ್ತು ಹಂದಿ ಅಣ್ಣಿ ನಡುವೆ ವೈಶಮ್ಯ ಹರಡಿತ್ತು.
ಮೋಟಿ ವೆಂಕಿ ಮರ್ಡರ್ ಪ್ರಕರಣದಲ್ಲಿ ಹಂದಿಹಣ್ಣಿಯನ್ನ ಜೈಲಿಗೆ ಕಳುಹಿಸಲಾಗಿತ್ತು. ಜೀವಬೆದರಿಕೆ ವಿಚಾರದಲ್ಲಿ ಕುದ್ದಾಗಿ ಶಿವಮೊಗ್ಗದ ಜೈಲಿನಲ್ಲಿ ಮೂರು ತಿಂಗಳ ಹಿಂದೆ ಜೈಲಿಗೆ ಹೋಗಿ ಬಂದಿದ್ದ ಹಂದಿ ಅಣ್ಣಿ ಮರಳು ದಂಧೆಯಲ್ಲಿ, ಬಡ್ಡಿ ವ್ಯವಹಾರದಲ್ಲಿ ಭರ್ಜರಿ ಹೆಸರು ಮಾಡಿದ್ದರು.
ಕೊಲೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಜೈಲಿನಲ್ಲಿ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾಗ ಪರಿಚಯವಾಗಿದ್ದ ಯುವತಿಯೋರ್ವಳನ್ನ ಅಣ್ಣಿ ಮದುವೆಯಾಗುತ್ತಾನೆ. ಮದುವೆಯಾಗಿ ಬಹುತೇಕ ರೌಡಿ ಆಕ್ಟಿವಿಟಿಯಿಂದ ಹೊರಗುಳಿದಿದ್ದನು. ಆದರೆ ಯಮನ ರೂಪದಲ್ಲಿ ಬಂದ ಅಪರಿಚಿತ ಗ್ಯಾಂಗ್ ನಡುರಸ್ತೆಯಲ್ಲಿ ಹೊಡೆದು ಹಾಕಿದೆ.