News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ: ರೈಲಿನ ಚೈನ್ ಎಳೆದ ಕಾರಣ ಜನಶತಾಬ್ದಿ ರೈಲು ಹತ್ತು ನಿಮಿಷ ತಡ !

Train Rail
Photo Credit : By Author

ಶಿವಮೊಗ್ಗ: ಭಾನುವಾರ ಬೆಳಿಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಾಲ್ಕು ಜನ ಶಿವಮೊಗ್ಗದಿಂದ ಹೊರಟಿದ್ದರು. ಬರುವಾಗ ಒಂದು ಬ್ಯಾಗ್ ಮರೆತು ಬಂದ ಕಾರಣದಿಂದಾಗಿ ಆ ನಾಲ್ಕು ಜನ ತಮ್ಮ ಮನೆಯವರಿಗೆ ಬ್ಯಾಗನ್ನು ತಂದು ಕೊಡಲು ದೂರವಾಣಿ ಮೂಲಕ ಒತ್ತಾಯಿಸಿದರು.

ಅಷ್ಟರಲ್ಲಿ ರೈಲು ಭದ್ರಾವತಿ ಸ್ಟೇಷನ್ ಗೆ ಬಂದು ತಲುಪಿತ್ತು. ಆಗ ಆ ಮನೆಯವರು ನೀವು ರೈಲಿನ ಚೈನ್ ಎಳೆಯಿರಿ. ಈಗ ಬರುತ್ತೇನೆ ಎಂದು ಹೇಳಿದರು. ತಕ್ಷಣ ಆ ನಾಲ್ಕು ಜನರ ಪೈಕಿ ಒಬ್ಬ ರೈಲಿನ ಚೈನ್ ಎಳೆದ. ರೈಲು ಭದ್ರಾವತಿ ದಾಟಿದ ಕೆಲವೇ ಕ್ಷಣದಲ್ಲಿ ನಿಂತಿತು.

ತಕ್ಷಣ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಯಾವ ಬೋಗಿಯಲ್ಲಿ ಚೈನ್ ಎಳೆದಿದ್ದಾರೆ ಎಂದು ಪರಿಶೀಲಿಸಿ, ಸಂಬಂಧಪಟ್ಟ ಆ ನಾಲ್ಕು ಜನರನ್ನು ರೈಲಿನಿಂದ ಕೆಳಗಿಳಿಸಿ, ರೈಲು ಹೋಗುವುದಕ್ಕೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ರೈಲು ಸುಮಾರು ಹತ್ತು ನಿಮಿಷ ತಡವಾಗಿ ಹೊರಟಿತು. ಈಗ ಆ ನಾಲ್ಕು ಜನ ಹಾಗೂ ಚೈನ್ ಎಳೆಯಲು ಹೇಳಿದ ಅವರ ಮನೆಯವರಿಗೆ ಭದ್ರಾವತಿ ರೈಲ್ವೇ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು