ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯ ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿಯಾಗಿದ್ದೂ, ಕೆಲ ಶಾಲಾ ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
18 ಜನ ಮಕ್ಕಳು ಹಾಗೂ ಎಂಟು ಜನ ಶಿಕ್ಷಕರಿಗೆ ಗಾಯಗಳಾಗಿದ್ದು ಇವರನ್ನ ಹೆಚ್ಚಿನ ಚಿಕಿತ್ಸೆಗಾಗಿ, ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತರಲಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪ್ರೌಢ ಶಾಲಾ ಮಕ್ಕಳು ಪ್ರವಾಸಕ್ಕೆ ಬಂದ ಸಂಧಭ೬ದಲ್ಲಿ ಘಟನೆ ನಡೆದಿದ್ದು ಅಂದಾಜು 60 ಜನ ವಿದ್ಯಾರ್ಥಿಗಳಿದ್ದರೂ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತಕ್ಕೆ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ ಪ್ರವಾಸದ ವಿದ್ಯಾರ್ಥಿಗಳಿದ್ದ ಬಸ್ನಲ್ಲಿ ದುಘ೬ಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲವೆಂಬುದು ತಿಳಿದು ಬಂದಿದೆ.