News Karnataka Kannada
Sunday, April 28 2024
ಶಿವಮೊಗ್ಗ

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮಧೇಯ ಪತ್ರದ ಮೂಲಕ ಬೆದರಿಕೆ

Former Minister KS Eshwarappa receives yet another threat letter
Photo Credit : News Kannada

ಶಿವಮೊಗ್ಗ:  ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಮತ್ತೇ ಬೆದರಿಕೆ ಪತ್ರಬಂದಿದೆ. ಅನಾಮಧೇಯ ಪತ್ರದ ಮೂಲಕ ಮಾಜಿ ಸಚಿವರಿಗೆ ಬೆದರಿಕೆ ಹಾಕಲಾಗಿದೆ. ಮುಸ್ಲಿಂ ಗುಂಡಾಗಳೇ ಎಂದು ಹೇಳಿದ್ದಕ್ಕೆ ಪತ್ರದ ಮೂಲಕ ಬೆದರಿಕೆ ಬಂದಿದೆ.

ಈಶ್ವರಪ್ಪ ಮನೆಗೆ ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಶಿವಮೊಗ್ಗ ಎಸ್ಪಿಗೆ ದೂರು ನೀಡಲಾಗಿದೆ. ಅನಾಮಧೇಯ ಬೆದರಿಕೆ ಪತ್ರ ತನಿಖೆ ಮಾಡಿ, ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮಾಜಿ ಸಚಿವರು ದೂರು ನೀಡಿದ್ದಾರೆ.

ಮಾಜಿ ಸಚಿವರ ಆಪ್ತ ಸಹಾಯಕರಿಂದ ಶಿವಮೊಗ್ಗದ ಎಸ್ಪಿಗೆ ಪತ್ರದ ಮೂಲದ ದೂರು ನೀಡಲಾಗಿದೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಕೆ.ಎಸ್.ಈಶ್ವರಪ್ಪರ ‘ಜಯಲಕ್ಷ್ಮಿ’ ನಿವಾಸ ಅನಾಮಧೇಯ ಪತ್ರ ಬಂದಿದೆ. ಈ ಹಿಂದೆ ಸಹ ವಿದೇಶಗಳಿಂದ ಈಶ್ವರಪ್ಪರಿಗೆ ಬೆದರಿಕೆ ಕರೆ ಬಂದಿತ್ತು.

ಬೆದರಿಕೆ ಕರೆ ಬಂದಾಗ ಅಂದೇ ಶಿವಮೊಗ್ಗ ಎಸ್ಪಿಗೂ ಕೆ.ಎಸ್.ಈಶ್ವರಪ್ಪ ದೂರು ನೀಡಿದ್ದರು.ಬೆದರಿಕೆ ಕರೆ ಸಮಯದಲ್ಲಿ ಈಶ್ವರಪ್ಪನವರ ಭದ್ರತೆಯನ್ನು ಸಹ ಹೆಚ್ಚಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು