News Karnataka Kannada
Sunday, May 19 2024
ಶಿವಮೊಗ್ಗ

ಶಿವಮೊಗ್ಗ: ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ- ಬಿ.ವೈ ವಿಜಯೇಂದ್ರ ಹೇಳಿಕೆ

Shimoga: BJP to form govt in Karnataka again: BY Vijayendra
Photo Credit : By Author

ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಗಳ ವತಿಯಿಂದ ರಾಜ್ಯಾದ್ಯಂತ ನಡೆದಿರುವ ಸಮಾವೇಶದ ಬಗ್ಗೆ, ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ, ಪತ್ರಿಕಾಗೋಷ್ಠಿಯನ್ನು ನಡೆಸಿ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಮತ್ತು ಮೂರ್ಚಗಳ ಸಮಾವೇಶದ ಸಂಚಾಲಕರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿದರು.

ಬಹುತೇಕ ಚುನಾವಣಾ ಸಂದರ್ಭದಲ್ಲಿರುವ ಕರ್ನಾಟಕ ರಾಜ್ಯ ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಸುಳ್ಳು ಭರವಸೆಯನ್ನ ಕೊಡುವುದರ ಮೂಲಕ ಮತದಾರರನ್ನ ಗೆಲ್ಲುವ ಪ್ರಯತ್ನವನ್ನ ಮಾಡುತ್ತಿರುವುದು ಹಾಸ್ಯಾಸ್ಪದ, ಅವರ ನಡುವಳಿಕೆಯನ್ನ ನಾವು ನೋಡುತ್ತಿದ್ದೇವೆ, ಆದರೆ ನಮ್ಮ ಪಕ್ಷದ ಸಾಧನೆ ಬೆಟ್ಟದಷ್ಟಿದೆ, ನಮ್ಮ ಭಾರತೀಯ ಜನತಾ ಪಕ್ಷ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವ ಸರ್ಕಾರ ಮತ್ತು ಅದೇ ರೀತಿ ಕರ್ನಾಟಕದಲ್ಲಿ  ಬಸವರಾಜ ಎಸ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ಮತ್ತು ಕಾರ್ಯಗಳನ್ನ ನಾವು ಜನತೆಗೆ ತಲುಪಿಸಬೇಕು. ಪ್ರತಿ ಮನೆ ಮನೆಗೆ ಮತ್ತು ಜನರ ಮನಕ್ಕೆ ಮುಟ್ಟಿಸುವಂತಹ ಕಾರ್ಯಗಳಲ್ಲಿ ನಾವು ಯಶಸ್ವಿಯಾಗಬೇಕು,ಎಂಬ ದೃಷ್ಟಿಯಿಂದ ಭಾರತೀಯ ಜನತಾ ಪಕ್ಷದ ಮೋರ್ಚಗಳು ಕೆಲಸ ಮಾಡಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ಭಾಗಗಳಲ್ಲಿ ಸಮಾವೇಶಗಳು ನಡೆಯಲಿವೆ,ಕರ್ನಾಟಕದಲ್ಲಿ ಮತ್ತೆ ಈ ಬಾರಿಯೂ ಬಿಜೆಪಿ ಆಡಳಿತಕ್ಕೆ ಬರಲಿದೆ, ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯಶಪಾಲ್ ಸುವರ್ಣ. ಸೇರಿದಂತೆ ಪ್ರಮುಖರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು