ಶಿವಮೊಗ್ಗ: ಅತೀಕ್ ಉರ್ ರೆಹಮಾನ್, ಎ ಎಸ್ ಐ ರವರು 1993ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದ್ದು, ಹಾಲೀ ಶಿವಮೊಗ್ಗದ ಬೆರಳು ಮುದ್ರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಬೆರಳು ಮುದ್ರೆ ವಿಭಾಗದಲ್ಲಿ ಸಲ್ಲಿಸಿರುವ ಪ್ರಶಂಸನೀಯ ಸೇವೆಗಾಗಿ 2020ನೇ ಸಾಲಿನ ಸ್ವಾತಂತ್ರೋತ್ಸವ ನಿಮಿತ್ತ ನೀಡಲಾಗುವ ಮಾನ್ಯ ರಾಷ್ಟ್ರಪತಿಗಳ ಪೊಲೀಸ್ ಶ್ಲಾಂಘನೀಯ ಸೇವಾ ಪದಕಕ್ಕೆ ಪುರಸ್ಕೃತರಾಗಿರುತ್ತಾರೆ.
ದಿನಾಂಕಃ 11-12-2022 ರಂದು ಬೆಂಗಳೂರಿನ ರಾಜ ಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರಾಷ್ಟ್ರಪತಿಯವರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಮಾನ್ಯ ರಾಜ್ಯಪಾಲರು ಕರ್ನಾಟಕ ರಾಜ್ಯ ರವರು ಅತೀಕ್ ಉರ್ ರೆಹಮಾನ್, ಎ ಎಸ್ ಐ ರವರಿಗೆ ಮಾನ್ಯ ರಾಷ್ಟ್ರಪತಿಗಳ ಪೊಲೀಸ್ ಶ್ಲಾಂಘನೀಯ ಸೇವಾ ಪದಕವನ್ನು ಪ್ರಧಾನ ಮಾಡಿರುತ್ತಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಅತೀಕ್ ಉರ್ ರೆಹಮಾನ್, ಎ ಎಸ್ ಐ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.