ಫುಡ್ ಕಾರ್ಪರೇಷನ್ ಆಫ್ ಇಂಡಿಯಾದ ಎದುರಿನ ಎರಡು ಶ್ರೀಗಂಧ ಮರವನ್ನ ಕಡಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಓರ್ ಆರೋಪಿಯನ್ನ ಶಂಕರ ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಮರಕಡಿದು ವಾಹನಕ್ಕೆ ಏರಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ಪ್ರಕರಣವನ್ನಬೆಧಿಸಿದ ಅರಣ್ಯ ಇಲಾಖೆಯ ತಂಡ ವಿರುಪಿನ ಕೊಪ್ಪದ ಕಣ್ಣಿಯಪ್ಪ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ 47 ಕೆಜಿ ಶ್ರೀಗಂಧದ ಮರ, ಮರಕಡಿಯಲು ಬಳಸಿದ ಎರಡು ಕತ್ತಿ, ಮೂರು ಗರಗಸ, ಒಂದು ದ್ವಿಚಕ್ರವಾಹನ, ಎರಡು ಹಾರೆ ಒಂದು ಮಣ್ಣು ತೆಗೆಯುವ ಹಿಡಿಕೆಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಭಾಗಿಯಾಗಿದ್ದು ಮೂವರ ಪತ್ತೆಗಾಗಿ ಶೋಧಕಾರ್ಯ ತೀವ್ರಗೊಳಿಸಲಾಗಿದೆ.