News Karnataka Kannada
Monday, May 06 2024
ಶಿವಮೊಗ್ಗ

ಕಾರು ಹತ್ತಿಸಿ ಭಯಾನಕವಾಗಿ ತಮ್ಮನ ಕೊಲೆಗೈದ ಸಹೋದರ !

Murder
Photo Credit : Twitter

ಶಿವಮೊಗ್ಗ: ಸಾಗರ ತಾ| ಚಿಪ್ಪಳ್ಳಿ ಬಳಿಯ ರಸ್ತೆಯಲ್ಲಿ ಕಾರು ಹತ್ತಿಸಿ ಸಹೋದರನನ್ನ ಹತ್ಯೆ ಮಾಡಿರುವ ಭಯಾನಕ ಘಟನೆ ನಡೆದಿದೆ.

ಶಿವಮೊಗ್ಗದ ಸಾಗರ ತಾ| ಚಿಪ್ಪಳಿ ಕ್ರಾಸ್ ಬಳಿ ಎನ್ ಹೆಚ್-206 ಪಕ್ಕದಲ್ಲಿ ಕೃತ್ಯ ನಡೆಸಲಾಗಿದೆ. ರಫೀಕ್ (45) ಕೊಲೆಯಾದ ದುರ್ದೈವಿ. ರಫೀಕ್, ಜಿಲ್ಲೆಯ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ. ಸಹೋದರರ ನಡುವಿನ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು.

ಸಹೋದರರ ಮಧ್ಯೆ ಗಲಾಟೆಯ ನಂತರ ಮೃತ ರಫಿಕ್ ರಸ್ತೆ ಮಧ್ಯೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಂತೆ ಕಾಣ್ತಿದ್ದಾರೆ. ಆಗ ಹಿಂದಿನಿಂದ ವೇಗವಾಗಿ ಕಾರು ಚಲಾಯಿಸಿಕೊಂಡ ಬಂದ ಆರೋಪಿ ಸಹೋದರ ಆತ ಮೇಲೆ ಕಾರನ್ನು ಹತ್ತಿಸಿ ಪರಾರಿಯಾಗಿದ್ದಾನೆ. ಈ ದೃಶ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.

ಇನ್ನು ಕೊಲೆ ಮಾಡಿದ ಬಳಿಕ ಸಾಗರ ತಾ| ಆನಂದಪುರದಲ್ಲಿರುವ ಮುರುಘಾ ಮಠದ ಆವರಣಕ್ಕೆ ಹೋಗಿ ಬಟ್ಟೆ ಬದಲಿಸಿದ್ದ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು