ಶಿವಮೊಗ್ಗ: ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ, ಗೋಪಾಳ ನಿವಾಸಿ ಡಾಕ್ಟರ್ ಎಚ್.ಎಸ್. ಸತೀಶ್(47) ಬುಧವಾರ ನಸುಕಿನಲ್ಲಿ ನಿಧನರಾಗಿದ್ದಾರೆ. ಇವರಿಗೆ ಮಿದುಳಿನಲ್ಲಿ ರಕ್ತಸ್ರಾವ ಆಗಿತ್ತು.
ಮೂರು ದಿನದ ಹಿಂದೆ ಕುಟುಂಬ ಸದಸ್ಯರ ಜೊತೆ ಉತ್ತರಕನ್ನಡ ಭಾಗಕ್ಕೆ ಪ್ರವಾಸಕ್ಕೆ ಹೋಗಿದ್ದ ಇವರು ದಿಢೀರ್ ಅಸ್ವಸ್ಥರಾಗಿದ್ದರು. ಅಲ್ಲಿಯೇ ಚಿಕಿತ್ಸೆ ಕೊಡಿಸಿ ಬಳಿಕ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಇವರಿಗೆ ಪತ್ನಿ ಡಾ. ಚೇತನಾ, ಮಕ್ಕಳಾದ ಸಂಜನಾ, ಸಮರ್ಥ ಇದ್ದಾರೆ.
ಇವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ತ್ಯಾವಣಿಗೆ ಗ್ರಾಮದಲ್ಲಿ ನೆರವೇರಿತು.