ಶಿವಮೊಗ್ಗ: ಜಿಲ್ಲೆಯ ಗೊಂದಿಚಟ್ನಿಹಳ್ಳಿಯಲ್ಲಿ ಯುವತಿಯೊಬ್ಬಳು ಯುವಕನ ಪ್ರೀತಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತ ಬಾಲಕಿ ವರ್ಷಿಣಿ (14)ಗೆ ತ್ಯಾಗರಾಜ್ ಎಂಬ ಯುವಕ ಈಕೆಗೆ ಪ್ರೀತಿಸು, ಪ್ರೀತಿಸು ಎಂದು ಕಾಟಕೊಡುತ್ತಿದ್ದ. ಯುವಕನ ಪ್ರೀತಿ ನಿರಾಕರಿಸಿ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತ್ಯಾಗರಾಜ್ ತುಂಬಾ ಸಮಯದಿಂದ ಈ ಬಾಲಕಿಗೆ ಪ್ರೀತಿಸು ಎಂದು ಟಾರ್ಚರ್ ನೀಡುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ಬಾಲಕಿ ಕುಟುಂಬಸ್ಥರು ವಾರ್ನಿಂಗ್ ಮಾಡಿದ್ದರು. ಆ ಸಮಯದಲ್ಲಿ ಇನ್ನುಮುಂದೆ ಹೀಗೆ ಮಾಡುವುದಿಲ್ಲ ಎಂದು ಯುವಕ ತ್ಯಾಗರಾಜ್ ಹೇಳಿದ್ದ. ಆದರೂ ಯುವಕ ಚಾಲಿ ಬಿಟ್ಟಿರಲಿಲ್ಲ, ಇದೀಗ ನಿನ್ನೆ ರಾತ್ರಿ (ಫೆ. 24)ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821