ಶಿವಮೊಗ್ಗ: ಐದು ಕಾಂಗ್ರೆಸ್ ಗ್ಯಾರಂಟಿ ಜಾರಿ ಹಿನ್ನಲೆಯಲ್ಲಿ ಬಿಜೆಪಿ ನಾಯಕರ ಟೀಕೆಗೆ ಮಧು ಬಂಗಾರಪ್ಪ ತಿರುಗೇಟು ನೀಡಿದ್ದು, ಇನ್ನೂ ಐದು ವರ್ಷ ಬಿಜೆಪಿ ಟೀಕೆ ಮಾಡುವುದೇ ಕೆಲಸವಾಗಿದೆ. ಬಿಜೆಪಿಗೆ ಪಕ್ಷದವರಿಗೆ ಮೋದಿ ಅವರ 15 ಲಕ್ಷ ತುಂಬಾ ಬೇಗ ಬಂದಿರಬಹುದು. ಅದಕ್ಕೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಟೀಕಿಸುತ್ತಿದ್ದಾರೆ ಎಂದು ಬಿಜೆಪಿಯನ್ನ ತಿವಿದಿದ್ದಾರೆ.
15 ಲಕ್ಷ ಜನರಿಗೆ ಖಾತೆಗೆ ಇನ್ನೂ ಬಂದಿಲ್ಲ ಮೊದಲು ಅದರ ಬಗ್ಗೆ ಬಿಜೆಪಿ ನಾಯಕರು ಉತ್ತರ ಕೊಡಲಿ ಆಮೇಲೆ ಗ್ಯಾರಂಟಿ ಜಾರಿ ಅರ್ಥಪೂರ್ಣ ವಾಗಿ ಸಿಎಂ ಮಾಡಿದ್ದಾರೆ.ಟೀಕೆ ಟಿಪ್ಪಣೆ ಬಿಟ್ಟು ಜನರು ನಿಮಗೆ 67 ಸ್ಥಾನ ಕೊಟ್ಟಿದ್ದಾರೆ..ಅದಕ್ಕೆ ಗೌರವ ಬರುವ ರೀತಿಯಲ್ಲಿ ಬಿಜೆಪಿಯವರು ಇರಬೇಕು. ಇನ್ನೂ ಟೀಕೆ ಟಿಪ್ಪಣೆಗೆ ಜನರು ಉತ್ತರ ಕೊಡುತ್ತಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನ ಐದು ಗ್ಯಾರಂಟಿ ಯಶಸ್ಸು ಆಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತುಂಬಾ ಸಮಯ ತೆಗೆದುಕೊಂಡು ಜಾರಿ ಮಾಡಲಾಗಿದೆ. ಈ ತೀರ್ಮಾನ ರಾಜ್ಯದ ಇತಿಹಾಸದಲ್ಲಿ ದಾಪುಗಾಲಾಗಿದೆ. ಸಿಎಂ ಸಿದ್ದರಾಮಯ್ಯನವರ ತೀರ್ಮಾನದಿಂದ ನನಗೆ ತುಂಬಾ ಸಂತೋಷ ಇದೆ ಪ್ರಣಾಳಿಕೆಯ ಉಪಾಧ್ಯಕ್ಷ ಆದ ನನಗೆ ಗ್ಯಾರಂಟಿ ಜಾರಿ ಬಗ್ಗೆ ಸಂತಸ ಇದೆ ಎಂದರು.
ಪಠ್ಯ ಪರಿಷ್ಕರಣೆ ಮಾಡುವೆ
ಎಲ್ಲ ಕಾನೂನು ಮತ್ತು ನಿಯಮಗಳ ಪರಾಮರ್ಶೆ ಮಾಡಿ ಗ್ಯಾರಂಟಿ ಜಾರಿ ಮಾಡಲಾಗಿದೆ. ಫಲಾನುಭವಿಗಳಿಗೆ ಕಾರ್ಯಕ್ರಮ ತಲುಪುವ ಉದ್ದೇಶ ನಮ್ಮದು. ಬಡವರಿಗೆ ಇದು ಎಲ್ಲವೂ ಮುಟ್ಟಬೇಕು. ಈ ಗ್ಯಾರಂಟಿ ಗೆ ಜನರು ಸಹಕರಿಸಬೇಕು. ಸರಿಯಾಗಿ ಅರ್ಥ ಮಾಡಿಕೊಂಡು ಗ್ಯಾರಂಟಿ ಲಾಭವನ್ನ ಜನರು ಪಡೆಯಬೇಕು ಎಂದರು.
ಜನರು ಸರಿಯಾಗಿ ಉಪಯೋಗ ಮಾಡಿಕೊಂಡರೆ ನಾವೆಲ್ಲರೂ ಸಂತೋಷ ಪಡುತ್ತೇವೆ…ಶಿಕ್ಷಣ ಇಲಾಖೆಯ ದೊಡ್ಡ ಜವಾಬ್ದಾರಿ ನನಗೆ ನೀಡಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಶಿಕ್ಷಕರು ಸಿಬ್ಬಂದಿ ಹೊಂದಿದ ಖಾತೆ ಆಗಿದೆ. ಇದೊಂದು ಸವಾಲಿನ ಖಾತೆ ಆಗಿದೆ. ಎಲ್ಲರ ಸಹಕಾರ ತೆಗೆದುಕೊಂಡು ಇಲಾಖೆ ನಿರ್ವಹಣೆ ಮಾಡುತ್ತೇನೆ ಎಂದರು.
ಸಿಎಂ ಮತ್ತು ಡಿಸಿಎಂ ಇಬ್ಬರು ಸೇರಿ ಜವಾಬ್ದಾರಿ ಕೊಟ್ಟಿದ್ದಾರೆ. ಇದನ್ನು ಸೂಕ್ತವಾಗಿ ನಿಭಾಯಿಸುವ ವಿಶ್ವಾಸ ಇದೆ. ಸ್ವಲ್ಪ ಸಮಯ ಬೇಕು. ಹಂತ ಹಂತವಾಗಿ ಎಲ್ಲವನ್ನು ನಿರ್ವಹಣೆ ಮಾಡುತ್ತೇನೆ. ಪಠ್ಯ ಪರಿಷ್ಕರಣೆ ತೀರ್ಮಾನ ಆಗುತ್ತದೆ.ಯಾವ ಯಾವ ಭಾಗ ಪರಿಷ್ಕರಣೆ ತರಬೇಕು ಎನ್ನುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಮಕ್ಕಳಿಗೆ ಮತ್ತು ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಮುಂಜಾಗೃತೆ ವಹಿಸಿ ಪಠ್ಯ ಪರಿಷ್ಕರಣೆ ಮಾಡಲಾಗುವುದು. ಈಗಾಗಲೇ ಪಠ್ಯಪುಸ್ತಕ ವಿತರಣೆ ಆಗಿದೆ.ಕಾನೂನು ಬದ್ಧವಾಗಿ ಪರಿಷ್ಕರಣೆಗೆ ಅಶಕಾಶ ಇದೆ. ಅದನ್ನು ಕಾನೂನುಬದ್ಧವಾಗಿ ಅದನ್ನು ಮಾಡುತ್ತೇವೆ ಎಂದರು.
ನಾನು ಖಾತೆ ಜವಾಬ್ದಾರಿ ವಹಿಸಿಕೊಂಡು ಇನ್ನೂ ಒಂದು ವಾರ ಆಗಿಲ್ಲ..ದೊಡ್ಡ ಗಾತ್ರದ ಇಲಾಖೆ ಇದಾಗಿದೆ …ಹಂತ ಹಂತವಾಗಿ ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ಕಙಡುಕೊಙಡು ಮುಙದೆ ಸಾಗಬೇಕಿದೆ.ಸ್ವಲ್ಪ ಕಾಲಾವಕಾಶದ ಅಗತ್ಯ ಇದೆ ಎಂದರು.