ಭದ್ರಾವತಿ: ಮನೆಗೆ ನುಗ್ಗಿ ಪತ್ನಿಯನ್ನ ಅಪಹರಿಸಿಕೊಂಡು ಹೋಗಿರುವ ಘಟನೆ ಜನ್ನಾಪುರದ ಎನ್ ಟಿ ಬಿ ಲೇಔಟ್ ನಲ್ಲಿ ನಡೆದಿದೆ. 5 ರಿಂದ 6 ಜನಅಪರಿಚಿತರಿಂದ ಅಪಹರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನ ನ್ಯೂಟೌನ್ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದಾರೆ.
ಎನ್ ಟಿ ಬಿ ಲೇಔಟ್ ನಲ್ಲಿ 33 ವರ್ಷದ ಮಹಿಳೆಯನ್ನ ಅಪಹರಿಸಿಕೊಂಡು ಹೋಗಿದ್ದು, ಪತಿ ಮನೆಯಲ್ಲಿರುವಾಗಲೇ ಪತ್ನಿಯನ್ನ ಅಪರಿಚಿತರು ಅಪಹರಿಸಿರುವುದಾಗಿ ಆರೋಪಿಸಿದ್ದಾರೆ. ಕೃಷ್ಣಪ್ಪ ತನ್ನ ಹೆಂಡತಿಮಕ್ಕಳೊಂದಿಗೆ ಭದ್ರಾವತಿ ಪೇಟೆಗೆ ಹೋಗಿ ಮನೆಗೆ ದಿನ ಬಳಕೆ ವಸ್ತು ಸಜ್ಜಾಗಿದ್ದರು. ಅಷ್ಟರಲ್ಲಿ ಅಪರಿಚಿತರು ಮನೆ ಒಳಗೆ ನುಗ್ಗಿದ್ದಾರೆ.
ಕೃಷ್ಣಪ್ಪ ಯಾರೆಂದು ಪ್ರಶ್ನಿಸುವ ವೇಳೆ ಮನೆಗೆ ನುಗ್ಗಿದ ಗ್ಯಾಂಗ್ ಅವರ ಬಾಯಿ ಮುಚ್ಚಿ ಕೊರಳಿಗೆ ಮಚ್ಚಿಟ್ಟು ಕೂಗಾಡದಂತೆ ಎಚ್ಚರಿಸಿದ್ದಾರೆ. ನಂತರ ಅವರ ಪತ್ನಿಯ ತಲೆಗೂದಲು ಹಿಡಿದು ಬಲವಂತವಾಗಿ ಎತ್ತಿಕೊಂಡು ಪತಿಯು ತಂದ ಬಿಳಿ ಬಣ್ಣದ ಜೆನ್ ಕಾರನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ.
ಕೃಷ್ಣಪ್ಪ ಮತ್ತು ಅಪಹರಣಕ್ಕೊಳಗಾದ ಮಹಿಳೆಗೆ ಇಬ್ಬರು ಮಕ್ಕಳಿದ್ದು ಇಬ್ಬರು ಮಕ್ಕಳನ್ನೂ ಅಪರಿಚಿತರು ಗದರಿಸಿ ಹೋಗಿದ್ದಾರೆ. ಪತಿಯ ಎದುರೇ ಪತ್ನಿಯನ್ನ ಅಪಹರಿಸಲಾಗಿದೆ.
ಚನ್ನರಾಯ ಪಟ್ಟಣದಲ್ಲಿ ಮಹಿಳೆ ಪತ್ತೆ
ಭದ್ರಾವತಿಯ ಎನ್ ಬಿಟಿ ಲೇಔಟ್ ನಲ್ಲಿ ಅಪಹರಿಸಲಾದ 33 ವರ್ಷದ ಮಹಿಳೆಯನ್ನ ಚನ್ನರಾಯಪಟ್ಟದಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ. ಮಹಿಳೆಯ ಅಪಹರಣದ ಆರೋಪಿಯನ್ನ ಇನ್ನೂ ಬಂಧಿಸಲಾಗಿಲ್ಲ. 16 ವರ್ಷಗಳ ಹಿಂದೆ ಕೃಷ್ಣಪ್ಪನವರ ಜೊತೆಮದುವೆಯಾಗಿದ್ದ ಮಹಿಳೆ ಏಳು ವರ್ಷ ಬೇರೆಯವರ ಜೊತೆ ಇದ್ದಿದ್ದರು ಎಂಬ ಮಾಹಿತಿ ಕೇಳಿ ಬರುತ್ತಿದೆ.
ಈಗ ಗಂಡ ಹೆಂಡತಿ ಬೇಕು ಎಂದು ವಾಪಾಸ್ ಬಂದ ಪರಿಣಮ ಈ ಹಿಂದೆ ಮಹಿಳೆಯ ಜೊತೆಗಿದ್ದ ವ್ಯಕ್ತಿಯಿಂದ ಈ ಅಪಹರಣ ನಡೆದಿದೆ ಎಂದು ಅಂದಾಜಿಸಲಾಗಿದೆ. ಆರೋಪಿ ಪತ್ತೆಗಾಗಿ ಖಾಕಿ ಪಡೆ ಬಲವಾದ ಬಲೆ ಬೀಸಿದೆ. ಆರೋಪಿ ಕುಣಿಗಲ್ ಕಡೆಯವನು ಎಂದು ಅಂದಾಜಿಸಲಾಗುತ್ತಿದೆ