ಟಿಪ್ಪುನಗರ ಬಲಭಾಗ 25ನೇ ವಾರ್ಡಿನಲೀ ನಿನ್ನೆ ನಡೆದ ಗಲಭೆಯ ನಂತರ ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಹೋದರರು ಹಿಂದೂ ಸಹೋದರರ ಮನೆಗಳಿಗೆ ತೆರಳಿ ಸಮಾಧಾನ ಹೇಳಿ ಏನೇ ಅನಾಹುತ ಆಗಿದೆಯೋ ನಾವೆಲ್ಲರೂ ಜೊತೆಯಲ್ಲಿ ಇದ್ದೇವೆ ಏನೇ ಆಸ್ತಿಪಾಸ್ತಿ ನಷ್ಟವಾಗಿದ್ದರೂ ಅದಕ್ಕೇನು ಪರಿಹಾರ ಸಿಗಬೇಕು ನಮ್ಮಿಂದ ಆದಷ್ಟು ಸಹಾಯ ಸಹಕರಿಸುತ್ತೇವೆ ಹಾಗೂ ಸರಕಾರದಿಂದ ನಿಮಗೆ ಏನು ಈ ಗಲಭೆಯಲ್ಲಿ ನಷ್ಟ ಆಗಿದೆಯೋ ನಷ್ಟಕ್ಕೆ ಪರಿಹಾರ ಸಿಗಲಿ ನಾವುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯ ತಿಳಿಸುತ್ತವೆ ಈ ಹಿಂದೆಯೂ ಸಹ ಯಾವತ್ತೂ ಈ ತರಹದ ಘಟನೆ ನಡೆದಿಲ್ಲ ಮುಂದೇನು ಸಹ ನಡೆಯಬಾರದು ಎಂದು ಸಮಾಧಾನ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಟಿಪ್ಪುನಗರ ಬಲಭಾಗ ಅಲ್ ಕುಬಾ ಮಸೀದಿ ಕಮಿಟಿಯವರು. ಗುರುಗಳು ಮತ್ತು ಉಸ್ಮಾನ್ ಮಸೀದಿ ಕಮಿಟಿಯವರು. ಗುರುಗಳು ಹಾಗೂ ಎಂ ಡಿ ಶರೀಫ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.