ವಿಜಯಪುರ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ವಿಜಯಪುರದಲ್ಲಿ ಪ್ರೊಟೆಸ್ಟ್ ಮಾಡಲಾಗುತ್ತಿದ್ದು,ಹಿಂದೂ ಕಾರ್ಯಕರ್ತ ರಾಘವ ಅಣ್ಣಿಗೇರಿ ಪ್ರತಿಭಟನೆಗೆ ಗನ್ ಸಮೇತ ಭಾಗಿಯಾಗಿದ್ದಾರೆ.
ಪ್ರೊಟೆಸ್ಟ್ನಲ್ಲಿ ಲೈಸನ್ಸ್ ಗನ್ ಸಮೇತ ಹಿಂದೂ ಕಾರ್ಯಕರ್ತ ರಾಘವ ಅಣ್ಣಿಗೇರಿ ಭಾಗಿಯಾಗಿದ್ದಾರೆ. ಜೀವ ಬೆದರಿಕೆ ಹಿನ್ನೆಲೆ ಗನ್ ಲೈಸೆನ್ಸ್ ಪಡೆದಿರುವ ರಾಘವ ಅಣ್ಣಿಗೇರಿ, ಸೊಂಟದಲ್ಲಿ ಪಿಸ್ತೂಲು ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಉಗ್ರಗಾಮಿಗಳ ಹಿಟ್ ಲಿಸ್ಟ್ನಲ್ಲಿ ರಾಘವ ಅಣ್ಣಿಗೇರಿ ಇದ್ದು, ಹೀಗಾಗಿ ಗನ್ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.