ಶಿವಮೊಗ್ಗ: ಮತಾಂತರ ನಿಷೇಧ ಕಾಯಿದೆಯಲ್ಲಿ ಏನೂ ವಿಶೇಷತೆ ಇಲ್ಲ ಎನ್ನುವ ಪ್ರತಿಪಕ್ಷದ ನಾಯಕರು ಕೆಲಸವಿಲ್ಲದೆ ಇದನ್ನು ವಿರೋಧಿಸಿದ್ದಾರೆಯೇ ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಿದೆಯಲ್ಲಿ ಏನೂ ವಿಶೇಷತೆ ಇಲ್ಲ ಎಂದಾದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಈಗಲಾದರೂ ಸ್ವಾಗತ ಮಾಡಲಿ ಎಂದು ಸವಾಲು ಹಾಕಿದರು.
ಅನೇಕ ಹೆಣ್ಣುಮಕ್ಕಳನ್ನು ಮದುವೆ ಆಗುವುದಾಗಿ ನಂಬಿಸಿ ಮತಾಂತರ ಮಾಡಿ, ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಮಾರಾಟ ಮಾಡಿರುವ ನಿದರ್ಶನಗಳಿವೆ. ಮತಾಂತರ ಮಾಡಿ ಅರ್ಧಕ್ಕೆ ಬಿಟ್ಟ ಉದಾಹರಣೆಗಳಿವೆ. ಇದು ಕಾಂಗ್ರೆಸ್ ನಾಯಕರಿಗೆ ಕಾಣುತ್ತಿಲ್ಲವೆ ? ಎಂದರು.
ದೇಶ, ಧರ್ಮ ಉಳಿಸುವುದು ಆರ್ಎಸ್ಎಸ್ ಅಜೆಂಡಾವಾಗಿದೆ. ಅದೇ ರೀತಿಯಲ್ಲಿ ಮತಾಂತರ ನಿಷೇಧ ಕಾಯಿದೆ ಕೂಡ ಸಂಘದ್ದೇ ಎಂಬುದನ್ನು ಪ್ರತಿಪಾದನೆ ಮಾಡಿದ್ದೇನೆ ಎಂದ ಅವರು, ಕಾಂಗ್ರೆಸ್ನವರಿಗೆ ಹೋರಾಟ ಮಾಡಲು ಈಗ ಯಾವುದೇ ವಿಷಯ ಇಲ್ಲ. ಹೀಗಾಗಿ ತಾವೇ ಆರಂಭಿಸಿರು ಮೇಕೆದಾಟು ಯೋಜನೆ ಬಗ್ಗೆ ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು.