News Karnataka Kannada
Friday, May 03 2024
ಶಿವಮೊಗ್ಗ

ಪ್ರತ್ಯೆಕ್ಷವಾದ ನಾಗರಹಾವನ್ನು ಜೆಸಿಬಿಯಿಂದ ಕೊಂದ ಪ್ರಕರಣ: ಎಫ್‌ಐಆರ್ ದಾಖಲು

Shivamogga News
Photo Credit :

ಶಿವಮೊಗ್ಗ : ಭಾರ್ಗವಿ ಪೆಟ್ರೋಲ್ ಪಂಪ್ ಬಳಿ ಸ್ಮಾರ್ಟ್ ಸಿಟಿ ಕಾಮಾಗಾರಿ ಹಿನ್ನೆಲೆಯಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಕಟ್ಟಡವನ್ನು ತೆರವುಗೊಳಿಸುವಾಗ ಪ್ರತ್ಯೆಕ್ಷವಾದ ನಾಗರಹಾವನ್ನು ಜೆಸಿಬಿಯಿಂದ ಕೊಂದ ಪ್ರಕರಣ ಈಗ ಅರಣ್ಯ ಇಲಾಖೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಶಿವಮೊಗ್ಗ ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರ ಭಾರ್ಗವಿ ಪೆಟ್ರೋಲ್ ಪಂಪ್ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಫುಟ್‌ಪಾತ್ ಮೇಲೆ ಇದ್ದ ದೇವಸ್ಥಾನವನ್ನು ಕೆಡವಲಾಗಿತ್ತು. ಈ ವೇಳೆ ನಾಗರ ಹಾವು ಪ್ರತ್ಯೆಕ್ಷವಾಗಿತ್ತು. ಈ ಹಾವನ್ನು ರಕ್ಷಿಸುವ ಬದಲು ನಿರ್ಲಕ್ಷಿಸಲಾಗಿತ್ತು. ಈ ಹಿನ್ನೆಲೆ ಹಾವು ಸಾವನ್ನಪ್ಪಿದೆ.

ಕಣ್ಣಿಗೆ ಹಾವು ಕಂಡರೂ ಉರಗತಜ್ಞ ಅಥವಾ ಅರಣ್ಯ ಇಲಾಖೆಯವರನ್ನು ಕರೆಸದೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಮಗಾರಿ ಮುಂದುವರೆಸಿದ್ದರು. ಇದನ್ನು ನೋಡಿದ ಅಲ್ಲಿನ ಹಮಾಲರು, ಆಟೋ ಚಾಲಕರು ಹಾಗೂ ಸ್ಥಳೀಯರು ಬಜರಂಗದಳದ ಧೀನ್ ದಯಾಳೂ ನೆತೃತ್ವದಲ್ಲಿ ಪ್ರತಿಭಟಿಸಿದ್ದರು. ಆದರೆ ಹೋರಾಟ ವ್ಯರ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು