ಶಿವಮೊಗ್ಗ : ಭಾರ್ಗವಿ ಪೆಟ್ರೋಲ್ ಪಂಪ್ ಬಳಿ ಸ್ಮಾರ್ಟ್ ಸಿಟಿ ಕಾಮಾಗಾರಿ ಹಿನ್ನೆಲೆಯಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಕಟ್ಟಡವನ್ನು ತೆರವುಗೊಳಿಸುವಾಗ ಪ್ರತ್ಯೆಕ್ಷವಾದ ನಾಗರಹಾವನ್ನು ಜೆಸಿಬಿಯಿಂದ ಕೊಂದ ಪ್ರಕರಣ ಈಗ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗ ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರ ಭಾರ್ಗವಿ ಪೆಟ್ರೋಲ್ ಪಂಪ್ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಫುಟ್ಪಾತ್ ಮೇಲೆ ಇದ್ದ ದೇವಸ್ಥಾನವನ್ನು ಕೆಡವಲಾಗಿತ್ತು. ಈ ವೇಳೆ ನಾಗರ ಹಾವು ಪ್ರತ್ಯೆಕ್ಷವಾಗಿತ್ತು. ಈ ಹಾವನ್ನು ರಕ್ಷಿಸುವ ಬದಲು ನಿರ್ಲಕ್ಷಿಸಲಾಗಿತ್ತು. ಈ ಹಿನ್ನೆಲೆ ಹಾವು ಸಾವನ್ನಪ್ಪಿದೆ.
ಕಣ್ಣಿಗೆ ಹಾವು ಕಂಡರೂ ಉರಗತಜ್ಞ ಅಥವಾ ಅರಣ್ಯ ಇಲಾಖೆಯವರನ್ನು ಕರೆಸದೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಮಗಾರಿ ಮುಂದುವರೆಸಿದ್ದರು. ಇದನ್ನು ನೋಡಿದ ಅಲ್ಲಿನ ಹಮಾಲರು, ಆಟೋ ಚಾಲಕರು ಹಾಗೂ ಸ್ಥಳೀಯರು ಬಜರಂಗದಳದ ಧೀನ್ ದಯಾಳೂ ನೆತೃತ್ವದಲ್ಲಿ ಪ್ರತಿಭಟಿಸಿದ್ದರು. ಆದರೆ ಹೋರಾಟ ವ್ಯರ್ತವಾಗಿದೆ.