ಚಿಕ್ಕಮಗಳೂರು: ಈವರೆಗೆ ಮತದಾರರಿಗೆ ಹೂ ಮುಡಿಸುತ್ತಿದ್ದ ಕಾಂಗ್ರೆಸ್ಸಿಗರು ಈಗ ಅವರೇ ಹೂ ಇಟ್ಟುಕೊಳ್ಳಲಾರಂಭಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸದಸ್ಯ ಟಿ.ರಾಜ ಶೇಖರ್ ಜಂಟಿ ಪತ್ರಿಕಾಗೋಷ್ಠಿಯ ಲ್ಲಿ ಮಾತನಾಡಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಮತದಾರರಿಗೆ ಹೂ ಮುಡಿಸುತ್ತಿದ್ದರು. ಮತದಾರರೀಗ ಜಾಗೃತರಾಗಿರುವ ಕಾರಣ ಮೊನ್ನೆ ನಡೆದ ನಗರಸಭೆ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ಸಿಗರೇ ಹೂ ಇಟ್ಟುಕೊಂಡು ಸಭೆಗೆ ಭಾಗವಹಿಸಿದ್ದರು ಎಂದು ವ್ಯಂಗ್ಯ ವಾಡಿದರು.
ಎರಡು ದಶಕಗಳಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ೪ ಬಾರಿ ಆಯ್ಕೆಯಾಗಿರುವ ಸಿ.ಟಿ. ರವಿಯವರು ಜನಮನ್ನಣೆ ಗಳಿಸಿದ್ದಾರೆ. ಜಿಲ್ಲೆಗೆ ಸೀಮಿತರಾಗದ ಶಾಸ ಕರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಭವಿಷ್ಯದ ನಾಯಕ ಎಂದು ಗುರುತಿಸಿ ಕೊಂಡಿದ್ದಾರೆ. ಇವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ವಿರೋಧ ಪಕ್ಷಗಳು ಕೇವಲ ಹಿಂದುತ್ವದ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದು ಬರುತ್ತಾರೆ ಎಂದು ಸುಳ್ಳು ಆರೋಪಗಳು ಮಾಡುತ್ತಿದ್ದಾರೆ ಎಂದರು.
ನಾಗಲ್ಯಾಂಡ್, ತ್ರಿಪುರ, ಮೇಘಾಲಯ ರಾಜ್ಯಗಳ ಚುನಾವಣಾ ಫಲಿ ತಾಂಶ ಜನಪ್ರಿಯ ನಾಯಕ ನರೇಂದ್ರ ಮೋದಿಯವರ ಜನಪರ ಆಡಳಿ ತಕ್ಕ ಸಾಕ್ಷಿಯಾಗಿದ್ದು ಮೋದಿಯವರ ಆಡಳಿತದ ಬಗ್ಗೆ ಜನಮನ್ನಣೆ ಸಿಕ್ಕಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿರುವ ೧೦೩ ಕೆರೆಗಳನ್ನು ಅಭಿವೃದ್ದಿಪಡಿಸಿದ್ದು ಇದ ಕ್ಕಾಗಿ ೧೧೫೩ ಕೋಟಿ ರೂ.ಗಳನ್ನು ವ್ಯಯಿಸಿರುವುದು ರೈತರಿಗೆ ಸಂತೋ ಷವನ್ನುಂಟು ಮಾಡಿದೆ ಎಂದರು.
ನಗರದ ಬಸವನಹಳ್ಳಿ ಕೆರೆ ಅಭಿ ವೃದ್ದಿಗೆ ೩೬ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಿದ್ದು ಜಿಎಸ್ಟಿ ಮತ್ತು ಇತರೆ ವೆಚ್ಚಗಳು ಹೋಗಿ ೨೭ ಕೋಟಿ ರೂ.ಗಳ ಕಾಮಗಾರಿ ಆಗಲಿದೆ ಎಂದರು.
ಮೊದಲು ೧೧೭ ಎಕರೆ ಕೆರೆ ವಿಸ್ತೀರ್ಣವಿದ್ದು ೯೯ ಎಕರೆಯಲ್ಲಿ ನೀರು ಸಂಗ್ರಹವಾಗುತ್ತಿತ್ತು. ಈಗ ಇರುವ ಕೆರೆಯನ್ನು ೮ ಅಡಿ ಆಳದವರೆಗೆ ಹೂಳು ತೆಗೆದು ಕೆರೆ ಅಭಿವೃದ್ದಿಪಡಿ ಸಲಾಗುವುದು. ಫುಡ್ಕೋರ್ಟ್, ವಾಟರ್ಫಾಲ್ಸ್, ಸೈಕ್ಲಿಂಗ್ ಮತ್ತು ಜಾಗಿಂಗ್ಗೆ ಅಲ್ಲಿ ಜಾಗ ಕಲ್ಪಿಸಲಾಗಿದೆ ಎಂದರು.
ನಗರದಲ್ಲಿ ಪರವಾನಗಿ ಶುಲ್ಕ ಹೆಚ್ಚಳವಾದ ಬಗ್ಗೆ ವರ್ತಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಶೇ.೫೦ ರಷ್ಟು ಶುಲ್ಕವನ್ನು ಕಡಿಮೆ ಮಾಡಲಾಗಿದೆ. ವರ್ತಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ಕವಿತಾ ಶೇಖರ್ ಉಪಸ್ಥಿತರಿದ್ದರು.