ಚಿಕ್ಕಮಗಳೂರು: ಒಡಿಶಾ ಬಹನಾಗ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಮೂಲದವರು ಸುರಕ್ಷಿತವಾಗಿ ಕೊಲ್ಕತ್ತ ತಲುಪಿರುವ ಮಾಹಿತಿ ಲಭ್ಯವಾಗಿದೆ.
ಕೋರಮಂಡಲ್ ಎಕ್ಸ್ ಪ್ರೆಸ್, ಬೈಯಪ್ಪನಹಳ್ಳಿ ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ನಿನ್ನೆ ಅಫಘಾತ ಸಂಭವಿಸಿತ್ತು. ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಈ ದುರಂತ ನಡೆದ ಸಂದರ್ಭದಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಳಸದ ೧೧೦ ಮಂದಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದು, ಅಪಘಾತದಲ್ಲಿ ೧೧೦ ಮಂದಿಯೂ ಬಚಾವ್ ಆಗಿದ್ದರು. ಸದ್ಯ ೧೧೦ ಮಂದಿ ಚಿಕ್ಕಮಗಳೂರು ಮೂಲದವರು ಸುರಕ್ಷಿತವಾಗಿ ಕೊಲ್ಕತಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ಬಸ್, ಒಂದು ಟಿಟಿ ಮೂಲಕ ಜಾರ್ಖಂಡ್ ಕಡೆ ಪಯಣ ಮಾಡಲಿದ್ದು, ಮಧ್ಯ ರಾತ್ರಿ ಸುಮಾರು ೧೨ ಕ್ಕೆ ಸಮ್ಮೇದ್ ಸಿಖರ್ಜಿಯನ್ನು ಯಾತ್ರಾರ್ಥಿಗಳು ತಲುಪಲಿದ್ದಾರೆ. ಹಾಗೂ ಯಾತ್ರಾರ್ಥಿಗಳು ಎರಡು ದಿನ ಅಲ್ಲೆ ಉಳಿಯಲಿದ್ದಾರೆ ಎನ್ನಲಾಗಿದೆ.
ಹೌರಾ ಎಕ್ಸ್ ಪ್ರೆಸ್ ನಲ್ಲಿದ್ದ ಕಳಸ ಮೂಲದವರು ಬಚಾವ್ ಆಗಿದ್ದೇಗೆ: ಬೆಂಗಳೂರಿನಿಂದ ಹೌರಾ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ೧೧೦ ಜನ ಯಶವಂತಪುರಕ್ಕೆ ಬರುವ ಮುನ್ನ ನೆಲಮಂಗಲದಲ್ಲಿ ಬೋಗಿ ಬದಲಿಸಿದ್ದ ಕಾರಣ ಕೊನೆಯ s೫, s೬, s೭ ಬೋಗಿ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.