ಕಡೂರು: ಪಟ್ಟಣದಲ್ಲಿ ಜನವರಿ ಮತ್ತು ಮೇ-೨೦೨೩ ಮಾಹೆಗಳಲ್ಲಿ ಮನೆ ಕಳವು ಮಾಡಿದ್ದ ಓರ್ವ ಆರೋಪಿ ಬಸವರಾಜ, ೨೭ ವರ್ಷ ಎಂಬುವವನನ್ನು ಪಿ.ಎಸ್.ಐ. ಕಡೂರು ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡು, ರೂ. ೨.೪೨ ಲಕ್ಷ ಬೆಲೆಯ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ . ಆರೋಪಿ ವಿರುದ್ಧ ಈ ಹಿಂದೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು.
ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ರಮ್ಯ ಎನ್ ಕೆ, ಪಿ.ಎಸ್.ಐ. ಮತ್ತು ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥಸ್ವಾಮಿ, ಮಧುಕುಮಾರ್, ಹರೀಶ, ಮಹಮ್ಮದ್ ರಿಯಾಜ್, ಲಿಂಗರಾಜು ಮತ್ತು ನಾಗೇಗೌಡ ಕಾರ್ಯನಿರ್ವಹಿಸಿದ್ದಾರೆ.