News Karnataka Kannada
Thursday, May 02 2024
ಚಿಕಮಗಳೂರು

ಎಚ್.ಡಿ. ದೇವೇಗೌಡ ಅವರ ಪಾದ ಸ್ಪರ್ಷದಿಂದ ಜೆಡಿಎಸ್‌ಗೆ ಬಲ ಬಂದಿದೆ: ಎಂಪಿಕೆ

HD Deve Gowda's touching his feet has strengthened JD(S):' MPK
Photo Credit : News Kannada

ಮೂಡಿಗೆರೆ : ಈ ಹಿಂದೆ ನಮ್ಮ ನಾಯಕ ಕುಮಾರಣ್ಣ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕಾಲಿನ ಸ್ಪರ್ಷ ಕ್ಷೇತ್ರಕ್ಕೆ ಆಗಿದ್ದರಿಂದ ಜೆಡಿಎಸ್‌ಗೆ ಇನ್ನಷ್ಟು ಬಲ ತಂದಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಅವರು ಆಲ್ದೂರು ಭಾಗದ ಸತ್ತಿಹಳ್ಳಿ, ಇಳೇಖಾನ್, ಕಾರೇಹಟ್ಟಿ, ಗುಲ್ಲ ನಪೇಟೆ, ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚಿಸಿ ಮಾತನಾಡಿದರು. ತಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸದಿಂದಾಗಿ ಜನರ ಆಶಿರ್ವಾದ ತನ್ನ ಮೇಲಿದೆ. ಕ್ಷೇತ್ರದಲ್ಲಿ ಇನ್ನು ಅನೇಕ ಸಮಸ್ಯೆಗಳಿವೆ. ನಾನು ಮಾಡಿದ ಜನಪರ ಕಾರ್ಯಗಳ ಮೇಲೆ ಜನರಲ್ಲಿ ನಂಬಿಕೆ ಯಿದೆ. ತಾನು ಏಕಾಂಗಿಯಾಗಿದ್ದು, ಹಣ ಮಾಡುವ ಉದ್ದೇಶ ನನಗಿಲ್ಲ. ನನ್ನ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಯೇ ನನ್ನ ಸಂಬಂಧಿಗಳು ಎಂದು ಹೇಳಿದರು.

ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿ, ಜನಪ್ರಿಯ ಎಂದು ಹೆಸರು ಗಳಿಸಿರುವ ಎಂ.ಪಿ.ಕುಮಾ ರಸ್ವಾಮಿ ಅವರು ಸರಳ ವ್ಯಕ್ತಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೇ ಎಚ್.ಡಿ.ಕು ಮಾರಸ್ವಾಮಿ ಅವರು ಈ ಬಾರಿ ಪಂಚರತ್ನ ಯೋಜನೆ ಮೂಲಕ ಜನರ ಸಮಸ್ಯೆಗೆ ಮುಕ್ತಿ ಕಾಣಿಸಲು ಹೊರಟಿದ್ದಾರೆ. ಅವರಿಗೆ ಶಕ್ತಿ ನೀಡಲು ಎಂ.ಪಿ.ಕುಮಾರಸ್ವಾಮಿ ಅವರನ್ನು ಬೆಂಬ ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ನ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು