ಚಿಕಮಗಳೂರು: ನಿಯಮ ಬಾಹಿರವಾಗಿ ರಚಿಸಿರುವ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿ ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸುವಂತೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಮುಸ್ಲಿಂ ಸಂಘಟನೆಗಳ ಒಕ್ಕೂಟ ಮುಖಂಡರಾದ ಕೆ.ಮಹಮದ್ ಮನವಿ ನೀಡಿ ಮಾತನಾಡಿ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿದರ್ಗಾದಲ್ಲಿ ಪ್ರತಿ ವರ್ಷ ನಡೆಯುವ ಉರುಸ್ ಮತ್ತು ದತ್ತಜಯಂತಿ ಕಾರ್ಯಕ್ರಮಗಳನ್ನು ಎರಡು ಪ್ರತ್ಯೇಕ ಸಮಿತಿಗಳ ನೇತೃತ್ವದಲ್ಲಿ ನೆರವೇರಿಸುತ್ತ ಬರುತ್ತಿತ್ತು. ಆದರೆ ಈ ವರ್ಷ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು ಸದರಿ ಸಮಿತಿಯನ್ನು ರಚಿಸುವಾಗ ಎರಡು ಸಮುದಾಯ ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡು ಸಮುದಾಯಕ್ಕೆ ಸಮಾನವಾದ ಪ್ರಾತಿನಿಧ್ಯವನ್ನು ನೀಡದೆಒಂದೇ ಸಮುದಾಯಕ್ಕೆ ಪ್ರಾಮುಖ್ಯತೆ ನೀಡಿ ರಚಿಸಲ್ಪಟ್ಟಿದೆ ಎಂದಿದ್ದಾರೆ.
ಇದನ್ನು ವಿರೋಧಿಸಿ ಕಳೆದ ಫೆಬ್ರವರಿ ೨೧ ರಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದು ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಹಾಗೂ ನಿಯಮಗಳಿಗೆ ಅನುಸಾರ ಎರಡು ಸಮುದಾಯದ ವರನ್ನು ಸೇರಿಸಿಕೊಂಡು ಸಮಿತಿ ರಚಿಸದೆ ಅದೇ ಸಮಿತಿಯನ್ನು ಮುಂದುವರಿಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಸಮಿತಿ ಅಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಒಂದೇ ಕೋಮಿನ ಕಾರ್ಯಕ್ರಮಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ ಮತ್ತೊಂದು ಕೋಮಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲಾಗುತ್ತಿದೆ, ಇದರಿಂದ ಭಕ್ತಾಧಿಗಳ ಮನಸ್ಸಿಗೆ ನೋವು ಉಂಟಾಗುತ್ತಿದೆ ಎಂದು ವಿಷಾಧಿಸಿದ್ದಾರೆ. ಅತಿ ಶೀಘ್ರದಲ್ಲಿ ಈಗಿರುವ ವ್ಯವಸ್ಥಾಪನಾ ಸಮಿತಿಯನ್ನು ವಿಸರ್ಜಿಸಿ ಉಭಯ ಸಮಾಜದವರಿಗೂ ಸಮಾನವಾದ ಪ್ರ್ರಾತಿನಿಧ್ಯವನ್ನು ಕಲ್ಪಿಸಿ, ಹೊಸ ಸಮಿತಿಯನ್ನು ರಚಿಸಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿ.ಎಸ್ ಖಲಂದರ್, ನಜೀರ್ ಅಹಮದ್, ಸೈಯದ್ಅನೀಫ್, ಸಿರಾಜ್ ಹುಸೇನ್, ಶಾದಬ್ ಅಲಂ ಖಾನ್ ಮತ್ತಿತರರಿದ್ದರು.