ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬೈರಾಪುರದಲ್ಲಿ ಹಾವಳಿ ಸೃಷ್ಟಿಸುತ್ತಿದ್ದ ತುಂಟ ಆನೆ ಬೈರನನ್ನು ಬಂಧಿಸುವ ಕಾರ್ಯಾಚರಣೆ ಆರಂಭವಾಗಿದೆ.
ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಆನೆಗಳು, ಅಭಿಮನ್ಯು, ಭೀಮ, ಗೋಪಾಲ್ ಸ್ವಾಮಿ, ಮಹೇಂದ್ರ, ಅಜ್ಜಯ್ಯ, ಪ್ರಶಾಂತ್ ಆಗಮಿಸಿವೆ. ‘ಪುಂಡಾನೆ’ ಬೈರನನ್ನು ಸೆರೆಹಿಡಿಯುವ ಕಾರ್ಯಾಚರಣೆ ಅಕ್ಟೋಬರ್ 31ರ ಸೋಮವಾರದಿಂದ ಆರಂಭಗೊಂಡಿದೆ.
ಘಟನಾ ಸ್ಥಳದಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಕಾಂತಿ, ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.