News Karnataka Kannada
Sunday, May 12 2024
ಚಿಕಮಗಳೂರು

ಬಿಜೆಪಿ ಸರ್ಕಾರಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಕರಾವಳಿ-ಮಲೆನಾಡು ಪ್ರಜಾಧ್ವನಿ ಕಾರ್ಯಕ್ರಮ

Coastal-Malnad Prajadhvani programme to create public awareness against BJP governments
Photo Credit : News Kannada

ಚಿಕ್ಕಮಗಳೂರು: ಬಿಜೆಪಿ ಸರ್ಕಾರಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಕರಾವಳಿ-ಮಲೆನಾಡು ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ೩೬ ಕ್ಷೇತ್ರದಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಎಂದು ಪ್ರಾರಂಭ ಮಾಡಿದ್ದಾರೆ. ಯಾವ ಮುಖ ಇಟ್ಟುಕೊಂಡು ಅನ್ನೋದು ಗೊತ್ತಾಗುತ್ತಿಲ್ಲ ಎಂದರು.

ಬಿಜೆಪಿ ಭ್ರಷ್ಟಾಚಾರವನ್ನು ವೈಭವೀಕರಿಸಲಾಗುತ್ತಿದೆ. ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಲೋಕಾಯುಕ್ತ ತನಿಖೆ ಆದ ಮೇಲೆ ಮಾಡಾಳ್ ವಿರೂಪಾಕ್ಷಪ್ಪ ಮೇಲೆ ಕ್ರಮ ಎಂದು ಹೇಳಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಡ. ಲೋಕಾಯುಕ್ತ ದವರು ವಿರೂ ಪಾಕ್ಷಪ್ಪ ಅವರ ಮಗನನ್ನು ಬಂಧಿಸಿ ದ್ದಾರೆ. ಇನ್ನೂ ಸಾಕ್ಷಿ ಬೇಕೆಂದರೆ ಇವರು ಭ್ರಷ್ಟಾಚಾರ ವೈಭವೀಕರಿಸು ವವರು ಎಂದರ್ಥ ಎಂದರು.

ಕರ್ನಾಟಕಕ್ಕೆ ಕೇಂದ್ರ ಸ್ಪಷ್ಟವಾಗಿ ಮಲತಾಯಿ ಧೋರಣೆ ಮಾಡುತ್ತಿದೆ. ಅಡಿಕೆ ತಿನ್ನುವುದರಿಂದ ರೋಗ ಬರು ತ್ತದೆ ಎಂದು ಜೆ.ಪಿ.ನಡ್ಡಾ ಆರೋಗ್ಯ ಸಚಿವರಾಗಿ ದ್ದಾಗ ಲೋಕಸಭೆಗೆ ಉತ್ತ ರಿಸಿದ್ದಾರೆ. ರಾಜ್ಯದ ಆರಗ ಜ್ಞಾನೇಂದ್ರ ಅಡಿಕೆ ಬೆಳೆ ಬದಲಾವಣೆ ಮಾಡ ಬೇಕು. ಅದರಿಂದ ಲಾಭವಿಲ್ಲ ಎಂದಿ ದ್ದಾರೆ. ಲಕ್ಷಾಂತರ ಜನರು ಅಡಿಕೆ ಅವಲಂಬಿಸಿದ್ದಾರೆ. ಅವರ ಮೇಲೆ ತೂಗು ಕತ್ತಿ ಬಿಟ್ಟಿದ್ದಾರೆ ಎಂದು ದೂರಿದರು. ಕ್ಷೇತ್ರಕ್ಕೆ ೮೦೦೦ ಕೋಟಿ ರೂ. ಅನುದಾನ ತಂದಿರುವುದಾಗಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಯಾವುದಾ ದರೂ ಒಂದು ಯೋಜನೆಯನ್ನು ಅವರು ಪೂರ್ಣಗೊಳಿ ಸಿದ್ದಾರ ಎಂ ದು ಪ್ರಶ್ನಿಸಿದ ಅವರು, ಸಗೀರ್ ಅಹ ಮದ್ ಮಂತ್ರಿ ಆಗಿದ್ದಾಗ ಯಗಚಿ ಯಿಂದ ನೀರು ತಂದಿದ್ದರು ಅವರು ಆಧುನಿಕ ಭಗೀರಥ. ಕೆಲಸ ಮಾಡದೆ ಬೆನ್ನು ತಟ್ಟಿಕೊಳ್ಳುವುದು ಬೇಡ ಎಂದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅತೀವೃಷ್ಠಿ ಸಂದರ್ಭ ದಲ್ಲಿ ನೆರವಿಗೆ ಬಾರದೆ ಚುನಾವ ಣೆಗಾಗಿ ಪ್ರತೀ ವಾರ ರಾಜ್ಯಕ್ಕೆ ಬರು ತ್ತಿದ್ದಾರೆ ಎಂದು ದೂರಿದರು. ಯಡಿಯೂರಪ್ಪ, ಬಿಜೆಪಿ, ಆರ್ ಎಸ್‌ಎಸ್ ಬಗ್ಗೆ ಕಾಂಗ್ರೆಸ್‌ಗೆ ಕನಿಕರವು ಇಲ್ಲ, ಅನುಕಂಪವು ಇಲ್ಲ ಎಂದರು.

ಬಿಜೆಪಿಗೆ ಪ್ರತ್ಯುತ್ತರ ನೀಡಲು ಹರಿಪ್ರಸಾದ್ ಅವ ರನ್ನು ಕಾಂಗ್ರೆಸ್ ಬಳಸಿಕೊಳ್ಳಿತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹುಟ್ಟಿದ್ದೆ ಚಡ್ಡಿಗಳು, ಕರಿಟೋಪಿ, ದೊಣ್ಣೆಯ ವರಿಗೆ ಉತ್ತರ ಕೊಡಲು. ನಾನು ಬದುಕಿರುವುದು ಅದಕ್ಕಾಗಿ ರಾಜಕಾರಣಕ್ಕಾಗಿ ಅಲ್ಲ ಎಂದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭ್ರಷ್ಟಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ಈಗ ಸಾಕ್ಷಿ ಸಿಕ್ಕಿದೆ. ಆದರೆ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಗಳಾದ ರೋಜಿ ಜಾನ್, ಬಿ.ಎಂ.ಸಂದೀಪ್, ಜಿಲ್ಲಾ ಉಸ್ತುವಾರಿ ಮಂಜುನಾಥ್ ಭಂಡಾರಿ, ಜಿಲ್ಲಾಧ್ಯಕ್ಷ ಡಾ.ಆಂಶುಮಂತ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು