ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಚಿಕ್ಕಮಗ ಳೂರು ಜಿಲ್ಲೆಯಲ್ಲಿ ೩೩ ನಾಮಪತ್ರ ಸಲ್ಲಿಕೆಯಾಗಿದೆ.
೧೨೩ – ಶೃಂಗೇರಿ, ವಿಧಾನಸಭಾ ಕ್ಷೇತ್ರ ದಿಂದ ಪ್ರೊಟಿಸ್ಟ್ ಸರ್ವ ಸಮಾಜ ಪಾರ್ಟಿಯಿಂದ ಎಂ.ಕೆ. ದಯಾನಂದ, ಜನತಾ ದಳ (ಜಾತ್ಯಾತೀತ )ದಿಂದ ಸುಧಾಕರ ಎಸ್ ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಗಳಾಗಿ ಮಂಜುನಾಥ ಯಾನೆ ಅಬ್ರಾ ಹಾಮ್, ಕೆ.ಆರ್. ಕುಸುಮ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ದಿಂದ ಉಮೇಶ್ ಬಿ.ಎ., ನಾಮಪತ್ರ ಸಲ್ಲಿಸಿದ್ದಾರೆ.
೧೨೪ – ಮೂಡಿಗೆರೆ, ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ದೀಪಕ್ ದೊಡ್ಡಯ್ಯ, ಕರುನಾಡು ಪಕ್ಷದಿಂದ ಹೆಚ್.ಎಸ್. ಕುಮಾರಸ್ವಾಮಿ, ಎ.ಎ.ಪಿ. ಯಿಂದ ಪ್ರಭು ಸಿ., ಪಕ್ಷೇತರರಾಗಿ ಬಿ.ಬಿ. ನಿಂಗಯ್ಯ, ನಾಮಪತ್ರ ಸಲಿಸಿದ್ದಾರೆ.
೧೨೫ – ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನೂರುಲ್ಲಾಖಾನ್, ಸೈಯ್ಯದ್ ಜಬಿ, ಶಾಬುದ್ದೀನ್, ಮೋಸೀನಾ, ಸಿ.ಕೆ.ಜಗದೀಶ, ಪುಟ್ಟೇಗೌಡ ಯು.ಪಿ., ರವಿಕು ಮಾರ್ ಎನ್.ಸಿ. ಪಕ್ಷೇತರರಾಗಿ ಹಾಗೂ ಜೆಡಿಎಸ್ನಿಂದ, ಭಾರತೀಯ ಜನತಾ ಪಕ್ಷದಿಂದ ಸಿ.ಟಿ. ರವಿ, ಜನತಾ ದಳ (ಜಾತ್ಯಾತೀತ)ದಿಂದ ತಿಮ್ಮಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಹೆಚ್.ಡಿ. ತಮ್ಮಯ್ಯ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.