ಚಿಕ್ಕಮಗಳೂರು: ದೇಶದ ಭದ್ರತೆ ವಿಚಾರದಲ್ಲಿ ಗಡಿ ಭಾಗದ ಸುರಕ್ಷತೆಯಷ್ಟೇ ಆಂತರಿಕ ಸುರಕ್ಷತೆಯು ಮುಖ್ಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಆಂತರಿಕ ಸುರಕ್ಷತೆಯಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು ಅವುಗಳನ್ನು ಮೆಟ್ಟಿ ನಿಲ್ಲುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಹೇಳಿದರು.
ನಗರದ ರಾಮನಹಳ್ಳಿ ಸಶಸ್ತ್ರ ಮೀಸಲು ಪಡೆ ಕವಾಯಿತು ಮೈದಾ ನದಲ್ಲಿ ಹಮ್ಮಿಕೊಳ್ಳಲಾದ ಮಹಿಳಾ ಪೊಲೀಸ್ ಪ್ರ.ಶಿಕ್ಷಣಾರ್ಥಿಗಳ ನಿರ್ಗ ಮನ ಪಥ ಸಂಚಲನ ವೀಕ್ಷಿಸಿ ಮಾತನಾಡುತ್ತಿದ್ದರು.
ದೇಶದ ಆಂತರಿಕ ಭದ್ರತೆಗೆ ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿಯಿದೆ. ಇವುಗಳನ್ನು ಮೆಟ್ಟಿ ನಿಲ್ಲಲು ಮಹಿಳಾ ಪೊಲೀಸರು ಹೆಚ್ಚು ಸಶಕ್ತರು ಎಂಬುದನ್ನು ನಾನು ನಂಬಿದ್ದೇನೆ.
ಮಹಿಳಾ ಪೊಲೀಸರಿಗೆ ಸಾರ್ವ ಜನಿಕರು, ಮಕ್ಕಳು, ಯುವಕ-ಯು ವತಿಯರ ಮನಸ್ಸನ್ನು ಅರ್ಥ ಮಾಡಿ ಕೊಳ್ಳುವ ಸಂಯಮವಿರುತ್ತದೆ. ಯಾ ವುದೇ ಸಂದರ್ಭದಲ್ಲೂ ಪುರುಷರಿ ಗಿಂತ ತಾವು ಕಡಿಮೆ ಎಂಬ ಭಾವನೆ ಯನ್ನು ಇಟ್ಟುಕೊಳ್ಳದೇ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸುವುದನ್ನು ಇಲ್ಲಿ ಂದಲೇ ಆರಂಭಿಸಿ ಎಂದರು.
ನೀವು ಪೊಲೀಸ್ ಠಾಣೆಗಳಿಗೆ ತೆರಳಿದಾಗ ಸಾಕಷ್ಟು ಸವಾಲುಗಳನ್ನು ನೋಡುತ್ತೀರಿ. ಹೆಣ್ಣುಮಕ್ಕಳ ಕಳ್ಳಸಾ ಗಾಣೆ ಒಂದು ದೊಡ್ಡ ಸವಾಲಾಗಿದೆ. ಮಾದಕವೆಸನಕ್ಕೆ ಮೋರೆ ಹೋಗಿರು ವವರು ಸಾಕಷ್ಟು ಮಂದಿ ಇದ್ದಾರೆ. ಇವುಗಳ ಬಗ್ಗೆ ಅರಿತು ಠಾಣೆಗಳಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ. ಈ ಹುದ್ದೆಗೆ ಸೇರಿ ಕೊಳ್ಳಲು ಸರ್ಕಾರಿ ಕೆಲಸಕ್ಕೆ ಸೇರಬೇ ಕೆಂಬ ಒಂದೇ ಉದ್ಧೇಶದಿಂದ ಬಂದಿ ರುತ್ತೀರಿ. ಪೊಲೀಸ್ ಇಲಾಖೆಗೆ ಸೇರು ವುದು ಸರ್ಕಾರಿ ಹುದ್ದೆಯಲ್ಲಿ ಅತಿ ಉನ್ನತವಾದ ಜವಾಬ್ದಾರಿಯನ್ನು ಹೊಂದಬೇಕಾಗುತ್ತದೆ ಎಂದರು.
ಇಲಾಖೆಯಲ್ಲಿ ಕರ್ತವ್ಯ ನಿರ್ವ ಹಿಸುವಾಗ ಸಾರ್ವಜನಿಕರ ಜೊತೆ ಹೆಚ್ಚಾಗಿ ಬೆರೆಯಬೇಕು. ಗುರುತರ ವಾದ ಜವಾಬ್ದಾರಿ ಯನ್ನು ನಿಭಾಯಿ ಸುವ ಜೊತೆಗೆ ಕೆಲಸದಲ್ಲಿ ಗೌರವ ಮತ್ತು ಉನ್ನತ ಆಲೋಚನೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊ ಲೀಸ್ ಅಧೀಕ್ಷಕಿ ಶ್ರೀಮತಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.