ಚಿಕ್ಕಮಗಳೂರು: ರಂಜಾನ್ ಹಬ್ಬದ ಪ್ರಯುಕ್ತ ನೂರಾನಿ ನೌಜವಾನ್ ಚಾರಿಟೇಬಲ್ ವತಿಯಿಂದ ನಗರದ ಗೌರಿಕಾಲುವೆಯ ನೂರಾನಿ ಮಸೀದಿಯಲ್ಲಿ ಕಾಂಗ್ರೆಸ್ ಕಿಸಾಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ನೇತೃತ್ವದಲ್ಲಿ ನಿವಾಸಿಗಳಿಗೆ ಉಚಿತವಾಗಿ ದಿನಸಿ ಕಿಟ್ ವಿತರಿಸಲಾಯಿತು.
ನಂತರ ಮಾತನಾಡಿದ ಅವರು ರಂಜಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಹಬ್ಬವಾಗಿದೆ. ಈ ಸಮಯದಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಉಪವಾಸವನ್ನು ಪೂರೈಸಿ ಶ್ರದ್ದೆಯಿಂದ ಹಬ್ಬವನ್ನು ಆಚರಿಸುತ್ತಾರೆ. ನಂತರ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದವರಿಗೆ ದಿನಸಿ ಕಿಟ್ ವಿತರಿಸಿ ಸಹಾಯಹಸ್ತ ಕಲ್ಪಿಸಲಾಗುತ್ತಿದೆ ಜೊತೆಗೆ ಗೌರಿಕಾಲುವೆಯಲ್ಲಿ ಈ ಬಾರಿ ಎಲ್ಲಾ ಸಮುದಾಯ ನಿವಾಸಿಗಳಿಗೂ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.
ನೂರಾನಿ ನೌಜವಾನ್ ಚಾರಿಟೇಬಲ್ ಅಧ್ಯಕ್ಷ ನೂರ್ಅಹ್ಮದ್ ಮಾತನಾಡಿ ರಂಜಾನ್ ಹಬ್ಬದ ಪ್ರಯುಕ್ತ ಕಳೆದ ಕೆಲ ದಿನಗಳ ಹಿಂದೆ ದಿನಸಿ ಕಿಟ್ಗಳನ್ನು ಮುಸ್ಲಿಂ ಸಮುದಾಯಕ್ಕೆ ವಿತರಿಸಲಾಗಿತ್ತು. ಇದೀಗ ಎರಡನೇ ಬಾರಿ ಗೂ ಸುಮಾರು ೩೫೦ ಕಿಟ್ಗಳನ್ನು ವಾರ್ಡಿನ ಎಲ್ಲಾ ಸಮುದಾಯಕ್ಕೂ ವಿತರಿಸಲಾಗಿದೆ ಎಂದು ತಿಳಿಸಿದರು.
ಚಾರಿಟೇಬಲ್ನ ಮುಖಂಡರುಗಳಾದ ಮುಂತೀಕ್, ಶಕೀಲ್, ರಿಜ್ವಾನ್, ಸಾಜು, ಇಕ್ಲಾಸ್, ವಾಸೀಮ್, ಅಕ್ಮಲ್, ಸಲೀಂ ಅಸ್ಲಾಂ, ಕಾಂಗ್ರೆಸ್ ಮುಖಂಡ ಶಹಬುದ್ದೀನ್ ಹಾಗೂ ನೂರಾರು ನಿವಾಸಿಗಳು ಹಾಜರಿದ್ದರು.