ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿ, ತೊಗರಿಹಂಕಲ್ ಹಾಗೂ ದಾಸರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಮಾರು ೮೦ಕ್ಕೂ ಹೆಚ್ಚು ಮಂದಿ ಬಿಜೆಪಿ ಮುಖಂಡರುಗಳು ಪಕ್ಷ ತೊರೆದು ಕಾಂಗ್ರೆಸ್ ತತ್ವ, ಸಿದ್ದಾಂತವನ್ನು ಒಪ್ಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸಂಜೆ ಪಕ್ಷ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೂಲಿ ಕಾರ್ಮಿಕರು, ಬಡವರು, ರೈತರು, ದೀನದಲಿತರು ಬಳಸುವ ದಿನನಿತ್ಯ ಪದಾರ್ಥಗಳ ಬೆಲೆಯನ್ನು ಗಗನಕೇರಿಸಿ ಹಾಗೂ ಕಳಪೆ ಕಾಮಗಾರಿಯ ನಡೆಸಿರುವ ಪರಿಣಾಮ ಬಿಜೆಪಿಯ ವಿರುದ್ಧ ಇಂದು ಕ್ಷೇತ್ರದ ಅತಿಹೆಚ್ಚು ಯುವಕರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಹಿರಿಯ ಮುಖಂಡ ಕೆ.ಮಹಮ್ಮದ್ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರತಿಯೊಬ್ಬ ಮುಖಂಡರು ಶ್ರಮವಹಿಸಿ ಕೆಲಸ ಮಾಡಿದರೆ ರಾಜ್ಯದಲ್ಲಿ ಸದೃಢ ಸರ್ಕಾರ ರಚನೆಗೊಂಡು ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು.
ಪಕ್ಷದ ಆಕಾಂಕ್ಷಿ ಹೆಚ್.ಡಿ.ತಮ್ಮಯ್ಯ ಮಾತನಾಡಿ ಬಿಜೆಪಿಯ ಶಾಸಕರು ಭಾವನೆಗಳ ಬಗ್ಗೆ ಮಾತನಾಡು ತ್ತಿದ್ದಾರೆ. ಆದರೆ ಜನರಿಗೆ ಬದುಕು ಮುಖ್ಯ. ಆ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿಯವರಿಗೆ ಈ ಬಾರಿ ಸೋಲಿನ ಭೀತಿ ಎದ್ದು ಕಾಣುತ್ತಿದೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಮುಂಡಾಳ ಸಮಾಜದ ತಾಲೂಕು ಅಧ್ಯಕ್ಷ ವಾಸು, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಂತೋಷ್ ಹಾಗೂ ಮುಖಂಡರಾದ ಮಲ್ಲೇನಹಳ್ಳಿ ಶಿವಣ್ಣ, ಸೋಮಶೇಖರ್, ಮಹೇಶ್, ಸಂದೀಪ್, ಮೋಹನ್, ಅರುಣ್ ಸೇರಿದಂತೆ ೮೦ ಮಂದಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಶಿವಾನಂದ್, ಕುಮಾರ್ಸ್ವಾಮಿ, ಅಶೋಕ, ಲೋಕೇಶ್ ಕಲ್ಲೇಶ್, ಸುರೇಶ್, ವಲ್ಲಿ ಪನ್ನೀರ್, ಜಗದೀಶ್, ಧರ್ಮಯ್ಯ, ಸುರೇಶ್, ಹಿರೇಮಗಳೂರು ನಾಗೇಶ್, ತಿಮ್ಮಯ್ಯ ಸಚಿನ್ ಉಪಸ್ಥಿತರಿದ್ದರು.