ಚಿಕ್ಕಮಗಳೂರು: ದಾಸರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಶಿನಗುಪ್ಪೆ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರ ಜೊತೆಗೆ ಜಾಗರ ಹೋಬಳಿಯ ಎಲ್ಲಾ ಪಂಚಾಯಿತಿ ಪ್ರಮುಖರು ಬಿಜೆಪಿ, ಜೆಡಿಎಸ್ ಮತ್ತು ಇತರೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ನಂಬಿಯಾರ್, ಜಿಲ್ಲಾ ಯುವ ಜನಪ್ರಿಯ ಸಮಾಜ ಸೇವಕರಾದ ಡಿ.ಸುರೇಶ್ ನೇತೃತ್ವದಲ್ಲಿ ಬದಲಾವಣೆ ಬಯಸಿ ಬಿಜೆಪಿ ದುರಾಡಳಿತ ಖಂಡಿಸಿ ಐವತ್ತಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಪಿ.ಮಂಜೇಗೌಡ, ಎಸ್.ಸಿ ಘಟಕದ ಮಾಜಿ ನಗರಾಧ್ಯಕ್ಷ ಹೆಚ್.ಎಸ್.ಜಗದೀಶ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಂತೋಷ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಇ.ಪ್ರಕಾಶ್, ಸ್ಥಳಿಯ ಮುಖಂಡ ಶಿವಾನಂದ್, ನಾಗಭೂಷಣ್, ಧರ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.