ಕೊಡಗು : ಪ್ರತಿ ವರ್ಷದಂತೆ, ಈ ವರ್ಷವೂ ಜೀವನದಿ ತಲಕಾವೇರಿಯಲ್ಲಿ ( Talakaveri ) ಪವಿತ್ರ ತೀರ್ಥೋದ್ಭವ ಆಗಿದೆ. ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಆಗಿದ್ದು, ಜೀವನದಿ ಕಾವೇರಿ ತೀರ್ಥೋದ್ಭವವನ್ನು ನೂರಾರು ಜನರು ಕಣ್ ತುಂಬಿಕೊಂಡಿದ್ದಾರೆ.
ಇಂದು ಪ್ರತಿ ವರ್ಷದಂತೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಉಂಟಾಗಿದೆ. ಮಕರ ಲಗ್ನದಲ್ಲಿ ಸರಿಯಾಗಿ 1 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ ಆಗಿದೆ.
ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮದಿಂದಾಗಿ ಕೆಲವೇ ಕೆಲವರಿಗೆ ಮಾತ್ರ ತೀರ್ಥೋದ್ಭವದಲ್ಲಿ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಜೀವನದಿ ಕಾವೇರಿ ತೀರ್ಥೋದ್ಭವವನ್ನು ಭಕ್ತರು ಕಣ್ತುಂಬಿಕೊಂಡರು.