News Karnataka Kannada
Sunday, May 05 2024
ಉತ್ತರಕನ್ನಡ

ಚುನಾವಣೆ ಬಂದಾಗ ಕೇಸರಿ ಶಾಲು ಧರಿಸುವವರನ್ನು ಕಂಡಿದ್ದೇನೆ- ಶ್ರೀನಿವಾಸ ಪೂಜಾರಿ

When elections came, I saw people wearing saffron shawls: Srinivas Poojary
Photo Credit : News Kannada

ಕಾರವಾರ: ಚುನಾವಣೆ ಬಂದಾಗ ಮಾತ್ರ ಹಿಂದೂ ಎಂದು ಹೇಳಿಕೊಂಡು ಕೇಸರಿ ಶಾಲು ಧರಿಸುವವರನ್ನು ಕಂಡರೆ ಆಶ್ಚರ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ತಾಲೂಕಿನ ಕಡವಾಡ ಗ್ರಾಮದ ನಂದವಾಳದಲ್ಲಿ ಸೋದೆ ಸದಾಶಿವರಾಯ ಬ್ರಿಟಿಷರನ್ನು ಸೋಲಿದ ನೆನಪಿಗೆ ನಡೆದ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಗವಾ ಧ್ವಜ ಹಾರಿಸಿ ಮಾತನಾಡಿದರು. ನಿನ್ನೆ ಮೊನ್ನೆಯವರೆಗೂ ತಾನು ಹಿಂದುವೇ ಅಲ್ಲ ಎಂದು ಕೆಲವು ಹೇಳಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಕೇಸರಿ ಶಾಲು ಧರಿಸುತ್ತಿದ್ದಾರೆ. ಈಗಿನ ಯುವಕರಲ್ಲಿ ಅಂತಹ ಧರ್ಮ ಹಾಗೂ ದೇಶ ಪ್ರೇಮ ಬರಬಾರದು. ಅವರಿಗೆ ಸದಾಶಿವರಾಯ ಮಾದರಿಯಾಗಬೇಕು ಎಂದರು.

ಸಮಾಜದಲ್ಲಿ ರಾಷ್ಟ್ರ ಭಕ್ತರು ಇರುವ ಯುವಕರ ಪಡೆ ಸೃಷ್ಟಿಯಾಗಬೇಕು. ಆದರೆ ನಮ್ಮ ಸಮಾಜದಲ್ಲಿಯೇ ಕುಕ್ಕರಿನಲ್ಲಿ ಬಾಂಬ್ ಇಟ್ಟುಕೊಂಡು ಓಡಾಡುವ ಯುವಕರೂ ಇರುವುದು ವಿಪರ್ಯಾಸ. ಅನವರನ್ನು ಕೂಡಾ ಸಮರ್ಥಿಸಿಕೊಳ್ಳುವವರು ಇರುವವರು ಇದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಎಲ್ಲರು ಧರ್ಮ ಹಾಗೂ ದೇಶದ ಏಕತೆಗೆ ದುಡಿಯಬೇಕು ಎಂದರು. ಆದರ್ಶ ಗೋಖಲೆ ಉಪನ್ಯಾಸ ನೀಡಿ, ಇಂದು ವಿಜಯ ದಿವಸ ಮಾತ್ರವಲ್ಲದೆ ಸಾವರ್ಕರ ಅವರ ಪುಣ್ಯ ತಿಥಿ ಹಾಗೂ ಪಾಕಿಸ್ತಾನದ ವಿರುದ್ಧ ಏರ್ ಸ್ಟ್ರೈಕ್ ಮಾಡಿದ ದಿನವೂ ಆಗಿದೆ. ಮಕ್ಕಳಲ್ಲಿ ದೇಶಪ್ರೇಮ ತುಂಬುವ ಕೆಲಸ ಮಾಡಿದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಸಫಲವಾಗುತ್ತವೆ. ಖಡ್ಗ ಹಿಡಿವ ಕೈಗಳಲ್ಲಿ ಲೇಖನಿ ಹಿಡಿದು ಸಾಹಿತ್ಯದ ಮೂಲಕ ದೇಶಪ್ರೇಮ ಮೂಡಿಸಿದ ಸದಾಶಿವರಾಯರು ಇಂದಿನ ಮಕ್ಕಳ ಆದರ್ಶವಾಗಬೇಕು ಎಂದರು.

ಶಾಸಕಿ ರೂಪಾಲಿ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶ ಎನ್ನುವ ವಿಷಯ ಬಂದಾಗ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು. ದೇಶದ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗಾಗಿ ಒಂದಾಗಬೇಕು ಎಂದರು. ಅನೇಕ ವಿಷಯಗಳು ಪಠ್ಯದಲ್ಲಿ ಸೇರಿಸಿಲ್ಲ. ಪಾಠದಲ್ಲಿ ಏನೂ ಇಲ್ಲ. ಯಾರನ್ನು ಹೊಗಳಬೇಕು. ಯಾರನ್ನು ಕೈಬಿಡಬೇಕು ಎನ್ನುವ ವಿಷಯದ ಬಗ್ಗೆ ತಿಳಿಸಿಲ್ಲ. ದೇಶದ ಉಳಿಬೇಕು ಎಂದಾದರೇ ನಾವೆಲ್ಲ ಒಂದಾಗಬೇಕು. ದೇಶದ ರಕ್ಷಣೆಗೆ ದುಡಿದವರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿ ಹೇಳಬೇಕಾದ ಅವಶ್ಯಕತೆ ಇದೆ ಎಂದರು.

ದೇಶದ ವಿಚಾರ ಬಂದಾಗ ರಾಜಕಾರಣ ಮಾಡಬಾರದು. ಮಕ್ಕಳಿಗೆ ದೇಶಪ್ರೇಮದ ಬಗ್ಗೆ ಹೇಳುವಾಗಲೂ ರಾಜಕಾರಣಿಗಳ ಬದಲು ದೇಶಭಕ್ತ ವಾಜಪೇಯಿ ಅವರ ಬಗ್ಗೆ ಹೇಳಬೇಕು. ಹಾಗೆಯೇ ರಾಜರ ಬಗ್ಗೆ ಹೇಳಬೇಕಾದರೂ ಎಚ್ಚರವಹಿಸಬೇಕು. ಈ ವಿಚಾರವಾಗಿಯೇ ರಾಜಕೀಯ ಪಕ್ಷಗಳು ಹೊಡೆದಾಡುತ್ತಿವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು